ಕೈ ಕೈ ಮಿಲಾಯಿಸಿಕೊಂಡ ಜೆಡಿಎಸ್ ಕಾಂಗ್ರೆಸ್ ಕಾರ್ಯಕರ್ತರು
ಹಿರಿಯೂರಿನಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಕಾರ್ಯಕರ್ತರ ತಳ್ಳಾಟ ನೂಕಾಟ ನಡೆದು ಕೈ ಕೈ ಮಿಲಾಯಿಸುವ ಘಟನೆ ನಡೆಯಿತು.
ಚಿತ್ರದುರ್ಗ ಹಿರಿಯೂರಿನಲ್ಲಿ ಇಂದು ನಾಡ ಪ್ರಭು ಕೆಂಪೇಗೌಡರ ಜಯಂತಿ ಹಾಗೂ ಒಕ್ಕಲಿಗರ ಸಮಾವೇಶವನ್ನ ಆಚರಿಸುತ್ತಿದ್ದು,ಈ ಜಯಂತಿಗೆ ಮಾಜಿಸಿಎಂ ಕುಮಾರಸ್ವಾಮಿ ಹಾಗೂ ಕಾಂಗ್ರೆಸ್ ನ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರನ್ನು ಆಹ್ವಾನಿಸಲಾಗಿತ್ತು. ಕುಮಾರಸ್ವಾಮಿ ಅವರು ಬಂದಾಗ ಡಿಕೆ ಡಿಕೆ ಎಂದು ಕಾಂಗ್ರೆಸ್ ಕಾರ್ಯಕರ್ತರು ಕೂಗಿದರು.ಇದರಿಂದ ಜೆಡಿಎಸ್ ಕಾರ್ಯಕರ್ತರ ಆಕ್ರೋಶ ಹೆಚ್ಚಾಯಿತು.ಸಿಟ್ಟಿಗೆದ್ದ ಜೆಡಿಎಸ್ ಕಾರ್ಯಕರ್ತರು ಡಿಕೆ ಶಿವಕುಮಾರ್ ಬಂದಾಗ ಕುಮಾರಸ್ವಾಮಿ ಎಂದು ಕೂಗಿದರು.ಇದು ಎರಡು ಪಕ್ಷಗಳ ಕಾರ್ಯಕರ್ತರ ನಡುವೆ ಗದ್ದಲಕ್ಕೆ ಕಾರಣವಾಯ್ತು. ಇದು ಅಷ್ಟಕ್ಕೆ ಸುಮ್ಮನಾಗದೆ ಎರಡು ಕಡೆಯ ಕಾರ್ಯಕರ್ತರು ತಳ್ಳಾಟ ನೂಕಾಟ ಮಾಡಿಕೊಂಡು ಮಾತಿನ ಚಕಮಕಿ ಹಾಗೂ ಕೈ ಕೈ ಮಿಲಾಯಿಸುವ ಹಂತಕ್ಕೂ ಹೋಯಿತು. ಆದರೆ ಇದರ ಮಧ್ಯೆ ಕೆಲ ಕಾರ್ಯಕರ್ತರು ಗದ್ದಲದಲ್ಲಿ ಮುಳುಗಿದ್ದ. ಕಾರ್ಯಕರ್ತರನ್ನು ಎಳೆದು ತಂದು ಬೇರೇಡೆಗೆ ಬಿಟ್ಟರು. ಈ ಘಟನೆಯಲ್ಲದಕ್ಕೂ ಆದಿಚುಂಚನ ಗಿರಿ ಶ್ರೀಗಳಾದ ನಿರ್ಮಲಾನಂದಸ್ವಾಮಿಜಿಸಾಕ್ಷಿಯಾದರು.