ಚಿತ್ರದುರ್ಗ,- ಹೊಳಲ್ಕೆರೆ ತಾಲೂಕಿನ ಚಿತ್ರಹಳ್ಳಿ ಗೇಟ್ ಪೋಲೀಸ್ ಠಾಣೆಯಲ್ಲಿ ಪಿಎಸ್ ಐ ಆಗಿ ಕಾರ್ಯನಿರ್ವಹಿಸುತ್ತಿದ್ದ ಗಾದಿ ಲಿಂಗಪ್ಪ ಅವರನ್ನು ಮೊಳಕಾಲ್ಮೂರು ತಾಲೂಕಿನ ರಾಂಪುರ ಠಾಣೆಗೆ ವರ್ಗಾವಣೆ ಮಾಡಿ ಆದೇಶಿಸಲಾಗಿದೆ.
ರಾಂಪುರ ಠಾಣೆಯಲ್ಲಿ ಪಿಎಸ್ ಐ ಆಗಿ ಕಾರ್ಯ ನಿರ್ವಹಿಸುತ್ತಿದ್ದ ಗುಡ್ಡಪ್ಪ ಅವರನ್ನು ಬಡ್ತಿ ನೀಡಿ ಡಿಪಿಓ ಕಚೇರಿಯ ಡಿಸಿಆರ್ ಬಿ ಅಥವ ಎಸ್ ಬಿ ಬ್ರಾಂಚ್ ಗೆ ವರ್ಗಾಯಿಸಲಾಗಿದೆ.
ಗಾದಿ ಲಿಂಗಪ್ಪ ಅವರು ಇದಕ್ಕೂ ಮೊದಲು ಚಿತ್ರದುರ್ಗ ನಗರದ ಕೋಟೆ ಠಾಣೆಯಲ್ಲಿ ಕಾರ್ಯ ನಿರ್ವಹಿಸಿ ನಂತರ ಹೊಳಲ್ಕೆರೆ ಚಿತ್ರಹಳ್ಳಿ ಗೇಟ್ ಪೋಲಿಸ್ ಠಾಣೆಗೆ ವರ್ಗಾವಣೆಗೊಂಡಿದ್ದು ಅಲ್ಲಿ ಕಾರ್ಯನಿರ್ವಹಿಸುತ್ತಿದ್ದರು.ಇದೀಗ ಇವರನ್ನು ರಾಂಪುರ ಠಾಣೆಗೆ ವರ್ಗಾಯಿಸಲಾಗಿದೆ. ಠಾಣೆಯಲ್ಲಿ ಗುಡ್ಡಪ್ಪ ಅವರಿಗೆ ಆತ್ಮೀಯ ಬಿಳ್ಕೊಟ್ಟರೆ ಗಾದಿ ಲಿಂಗಪ್ಪ ಅವರನ್ನು ಬರಮಾಡಿಕೊಂಡು ಅಭಿನಂಧಿಸಲಾಯಿತು
ಸಂಯುಕ್ತವಾಣಿ