ಚಿತ್ರದುರ್ಗ,: ಸರ್ಕಾರ ಸಿಡಿ ಲೇಡಿ ಕೇಸ್ ನಲ್ಲಿ ರಮೇಶ್ ಜಾರಕಿಹೊಳಿ ಅವರನ್ನು ರಕ್ಷಿಸುತ್ತಿಲ್ಲ ಎಂದು ಸಣ್ಣ ನೀರಾವರಿ ಸಚಿವ ಮಾಧು ಸ್ವಾಮಿ ಹೇಳಿದರು.
ಅವರು ಚಿತ್ರದುರ್ಗದಲ್ಲಿ ಮಾಧ್ಯಮಗಳೊಂದಿಗೆ ಅವರು ಮಾತನಾಡಿದರು.
ಸಿದ್ದರಾಮಯ್ಯ ಅವರು ಸರ್ಕಾರ ರಮೇಶ್ ಜಾರಕಿಹೊಳಿ ಅವರನ್ನು ರಕ್ಷಿಸುತ್ತಿದೆ ಎಂಬ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಎಸ್ ಐ ಟಿ ಚಾರ್ಜ್ ಶೀಟ್ ಹಾಕಿದೆ. ವರದಿ ಸಲ್ಲಿಸಿದೆ. ಇದರಿಂದ ನ್ಯಾಯಾಲಯದ ಮುಂದೆ ಯಾರನ್ನ ಯಾರೂ ರಕ್ಷಣೆ ಮಾಡುವ ವಿಚಾರ ಬರುವುದಿಲ್ಲ. ರಮೇಶ್ ಜಾರಕಿ ಹೊಳಿ ಕೇಸ್ ನಿಂದ ಮುಕ್ತರಾದರೆ ಸಚಿವರಾಗುತ್ತಾರೆ. ಇದರಿಂದ ಗೊಂದಲವಿಲ್ಲ. ಇನ್ನು ರಮೇಶ್ ಜಾರಕಿಹೊಳಿ ಫಡ್ನವಿಸ್ ಭೇಟಿ ಮಾಡಿರುವುದರಲ್ಲಿ ತಪ್ಪೇನು? ನಿಕಟವಾದ ಸ್ಥಳ ಬಾಂಬೆಯಾಗಿರುವುದರಿಂದ ಭೇಟಿ ಯಾಗಿದ್ದಾರೆ.ಶಾಲಾ ಕಾಲೇಜ್ ಆರಂಭದ ವಿಚಾರಕ್ಕೆ ಸಂಬಂಧಿಸಿದಂತೆ ಮೂರನೇ ಅಲೆ ಹೇಗೆ ವರ್ತಿಸುತ್ತದೆ ಎಂಬುದನ್ನು ನೋಡುತ್ತಿದ್ದೇವೆ. ಮಕ್ಕಳ ಮೇಲೆ ಹೆಚ್ಚು ಪರಿಣಾಮಕಾರಿಯಾಗುತ್ತದೆ ಎಂದು ಕೇಳಿದ್ದೇವೆ. ಡೆಲ್ಟಾ ವೈರಸ್ ಸಹ ಹರಡುತ್ತಿದೆ. ಹಾಗಾಗಿ ಒಂದು ತಿಂಗಳು ನೋಡಿ ಬಳಿಕ ತೀರ್ಮಾನ ಮಾಡುತ್ತೆವೆ. ಸಾವಿಗೆ ಬೇಕಾದಷ್ಟು ಬೇಕಾದಷ್ಟು ಕಾರಣಗಳಿವೆ. ಡೆತ್ ಅಡಿಟಿಂಗ್ ಆದ ನಂತರ ಯಾರು ಯಾವ ಕಾರಣಕ್ಕೆ ಮೃತಪಟ್ಟರೂ ಎಂದು ತಿಳಿಯುತ್ತದೆ ವಿದ್ಯಾಗಮದಿಂದ ಸತ್ತಿದ್ದಾರಾ? ಸಾಯಲು ವಿದ್ಯಾಗಮ ಕಾರಣ ಎಂದು ಯಾಕೆ ಪ್ರಚಾರ ಮಾಡರುತ್ತೀರಾ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಸಂಯುಕ್ತವಾಣಿ