ಸುಮ್ಮನಿದ್ದ ಹಾವನ್ನು ಕೆಣಕಿದ್ದೀರಾ ಜೋಕೆ..

ಜಿಲ್ಲಾ ಸುದ್ದಿ

ಸುಮ್ಮನಿದ್ದ ಹಾವನ್ನು ಕೆಣಕಿದ್ದೀರಾ ಜೋಕೆ ಪಾದಯಾತ್ರೆ ಮೂಲಕ ಬಿಜೆಪಿ ವಿರುದ್ಧ ಹೋರಾಟ ನಡೆಸಿ ಸರ್ಕಾರ ರಚಿಸಿದವರು  ಸಿದ್ದರಾಮಯ್ಯ ಅಂತವರಿಗೆ ಅಪಮಾನ ಮಾಡಿದ್ದೀರಾ ಹುಷಾರ್ ಎಂದು  ಆಂಜನೇಯ ಬಿಜೆಪಿಗರಿಗೆ ಎಚ್ಚರಿಕೆ ನೀಡಿದರು

ಅವರು ಚಿತ್ರದುರ್ಗದಲ್ಲಿ ಪ್ರತಿಭಟನೆಯ ನೇತೃತ್ವ ವಹಿಸಿ ಮಾತನಾಡಿದರು.

 

 

 

ಮಡಿಕೇರಿಯಲ್ಲಿ ಮಳೆ ಹಾನಿಗೊಳಗಾದ ಪ್ರದೇಶಗಳಿಗೆ ಭೇಟಿ‌ ನೀಡಿ ಅವರ ಕಣ್ಣೀರು ಒರೆಸಲು ಹೋಗಿದ್ದ ಮಾಜಿ ಸಿಎಂ ಸಿದ್ದರಾಮಯ್ಯ ಸಂವಿಧಾನ ಬದ್ಧವಾಗಿ ಒಬ್ಬ ವಿರೋಧ ಪಕ್ಷದ ನಾಯಕನಾಗಿ ಹೋಗಿದ್ದ ಸಿದ್ದರಾಮಯ್ಯ ಅವರಿಗೆ ಗೂಂಡಾ ಬಿಜೆಪಿಗಳು, ಸಂಸ್ಕೃತಿ, ಸಂಸ್ಕಾರವಿಲ್ಲದ ಗೂಂಡಾ ಬಿಜೆಪಿಗರು ಮೊಟ್ಟೆಯಿಂದ ಹೊಡೆದು ಅಪಮಾನ ಮಾಡಿದ್ದಾರೆ ಎಂದು‌ ಕಿಡಿ‌ ಕಾರಿದರು. ಕೊಡಗು ಬಿಜೆಪಿಯದ್ದಲ್ಲ ಕಾಂಗ್ರೆಸ್ ಗೂ ಸೇರಿದೆ ಕಾಂಗ್ರೆಸ್ ನವರು ಇದ್ದಾರೆ, ಕೊಡಗಿನ ಬಿಜೆಪಿಗರು ಸುಮ್ಮನಿದ್ದ ಸರ್ಪವನ್ನು ಬಡಿ ದೆಬ್ಬಿಸಿದ್ದಾರೆ, ಘಟನೆ ನಡೆದಾಗ ಪೋಲಿಸರು ಕೂಡ ರಕ್ಷಣೆಯನ್ನು‌ ನೀಡಿಲ್ಲ.ಇದರಲ್ಲಿ ಕೂಡ ನಿಸ್ಸಾಯಕರಾಗಿದ್ದಾರೆ. ಆಡಳಿತ ಪಕ್ಷವಾಗಿ ಕಾನೂ‌ನು ಪಾಲಿಸುವಲ್ಲಿ ಆಡಳಿತ ಸಂಪೂರ್ಣವಾಗಿ ವಿಫಲವಾಗಿದೆ, ಇದಕ್ಕೆ ಪ್ರತಿಕ್ರಿಯಿಸಿರುವ ಕೆಪಿಸಿಸಿ‌ ಅಧ್ಯಕ್ಷ ಡಿಕೆ‌ಶಿವಕುಮಾರ್ ಅವರು ನಾನು ರಾಜ್ಯದಾದ್ಯಂತ ಕರೆ ಕೊಟ್ಟರೆ ರಾಜ್ಯ ಸರ್ಕಾರದ ಯಾವುದೇ ಸಚಿವರು ಜಿಲ್ಲೆಗಳಲ್ಲಿ ಸಭೆಗಳು ನಡೆಸಲು ಬಿಡುವುದಿಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ. ಆದರೆ ನೀವು ಮಾಡಿದ ಅಪಮಾನವನ್ನು ಕೃತ್ಯವನ್ನು ಮಾಡಲು ಕಾಂಗ್ರೆಸಿಗರು ಇಳಿಯುವುದಿಲ್ಲ, ಸ್ವಾತಂತ್ರ ಭಾರತದ ವಾರಸುದಾರರು ನಾವು ಎಂದು ಹೇಳಿದರು. ಪ್ರತಿಭಟನೆಯಲ್ಲಿ ಚಳ್ಳಕೆರೆ ಶಾಸಕ ರಘುಮೂರ್ತಿ,  ಮೊಳಕಾಲ್ಮೂರಿನ ಕಾಂಗ್ರೆಸ್ ಮುಖಂಡ ಯೋಗೇಶ್ ಬಾಬು, ಜಿಲ್ಲಾಧ್ಯಕ್ಷ ತಾಜ್ ಪೀರ್ ಮುಖಂಡ ರಾಮಪ್ಪ, ಇನ್ನಿತರರು ಹಾಜರಿದ್ದರು

Leave a Reply

Your email address will not be published. Required fields are marked *