ಚಿತ್ರದುರ್ಗ- ಉಪ್ಪು ತಿಂದವರು ನೀರು ಕುಡಿಯಲೇ ಬೇಕು ಎಂದು ಸಿಡಿ ಪ್ರಕರಣ ಕುರಿತು ಜಗ್ಗೇಶ್ ಹಾಡು ಹೇಳಿದರು
ಅವರು ಚಿತ್ರದುರ್ಗದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದರು.
ರಾಜ್ಯದಲ್ಲಿ ಕೋಲಾಹಲ ಎಬ್ಸಿರುವ ಸಿಡಿ ಪ್ರಕರಣ ಬಿಸಿ ಬಿಸಿ ಚರ್ಚೆಯಾಗುತ್ತಿದೆ. ಯಾರೇ ಉಪ್ಪು ತಿಂದ ಮೇಲೆ ನೀರು ಕುಡಿಯಲೇ ಬೇಕು ಎಂಬ ಪದವೇ ಸಾಕು ಎಂಬುದು ನನ್ನ ಭಾವನೆ. ತಂತ್ರಕ್ಕೆ ಪ್ರತಿ ತಂತ್ರ ಇವತ್ತಿನ ಸೈದ್ದಾಂತಿಕ ನೆಲೆಯಲ್ಲಿದೆ. ಹೆಚ್. ಡಿ ಕುಮಾರಸ್ವಾಮಿ ನನ್ನ ಸಿನಿಮಾಗಳ ನಿರ್ಮಾಪಕರಾಗಿದ್ದವರು, ಡಿಕೆಶಿ ನನ್ನ ರಾಜಕೀಯಕ್ಕೆ ತಂದವರು ಎಂದರು. ಎಲ್ಲರೂ ನನಗೆ ಉತ್ತಮ ಸ್ನೇಹಿತರು. ಎಲ್ಲಾ ಕ್ಷೇತ್ರದಲ್ಲೂ ಪ್ರಾಮಾಣಿಕತೆಗಿಂತ ವಾಮ ಮಾರ್ಗಗಳೆ ಪ್ರಧಾನವಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು. ಹಾಗೆಯೇ ಸಿಡಿ ಪ್ರಕರಣದಲ್ಲಿ ಸರ್ಕಾರ ಕ್ಕೆ ಮುಳುವಾಗುತ್ತಾ ಎಂಬ ಪ್ರಶ್ನೆಗೆ ನಟ ಜಗ್ಗೇಶ್ ನಿರಾಕರಿಸಿದರು.
ಸಂಯುಕ್ತವಾಣಿ