ಚಿತ್ರದುರ್ಗ: ನಾನು ಮಂತ್ರಿಯಾಗಿದ್ದಾಗ ಹೊಳಲ್ಕೆರೆ ಕ್ಷೇತ್ರಕ್ಕೆ ತಂದಷ್ಟು ಕೊಳವೆ ಬಾವಿಗಳನ್ನು ಚಂದ್ರಪ್ಪ ಮಂಜೂರು ಮಾಡಿಸಿಕೊಂಡು ಬರಬೇಕು ಇಲ್ಲಾ ಮಾನವೀಯತೆ ಇದ್ದರೆ ಮಂಜೂರಾಗಿರುವ ಕೊಳವೆ ಬಾವಿ ಕೊರೆಯಿಸಲು ಅಧಿಕಾರಿಗಳಿಗೆ ಸೂಚನೆ ನೀಡಿ ಎಂದು ಮಾಜಿ ಸಚಿವ ಹೆಚ್. ಆಂಜನೇಯ ಹಾಲಿ ಶಾಸಕ ಎಂ. ಚಂದ್ರಪ್ಪಗೆ ಸವಾಲೆಸೆದರು.
ಚಿತ್ರದುರ್ಗ ನಗರದ ಕಾಂಗ್ರೆಸ್ ಕಚೇರಿಯಲ್ಲಿ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು, ಯಾವುದೇ ಕಾಮಗಾರಿ
ಹುಟ್ಟಿಗೆ ಯಾರು ಕಾರಣ ಆಗಿರುತ್ತಾರೋ ಅವರಿಗೆ ಅದರ ಶ್ರೇಯಸ್ಸು ಸಿಗಬೇಕು. ಸುಳ್ಳು ಹೆಳಿಕೊಂಡು ಹೋದರೆ ಅದಕ್ಕೆ ಶ್ರೇಯಸ್ಸು ಸಿಗುವುದಿಲ್ಲ. ಸಾಧ್ಯವಾದರೆ ನಾನು ತಂದಿರುವಷ್ಟು ಕೊಳವೆ ಬಾವಿಗಳನ್ನು ಚಂದ್ರಪ್ಪ ಕ್ಷೇತ್ರಕ್ಕೆ ತರಲಿ ಎಂದರು. ನಾನು ಮಾಡಿರುವ ಅಭಿವೃದ್ಧಿ ಕೆಲಸಗಳನ್ನು ನಾನು ತಂದಿದ್ದೆನೆ ಎಂದು ಬರೀ ಸುಳ್ಳು ಹೇಳಿಕೊಂಡು ಓಡಾಡುತ್ತಿದ್ದಾರೆ. ಇನ್ನು ಭದ್ರಾ ಮೇಲ್ದಂಡೆ ಯೋಜನೆಯಿಂದ ಹೊಳಲ್ಕೆರೆ ಕ್ಷೇತ್ರ ಕೈ ಬಿಟ್ಟು ಹೋಗಿತ್ತು. ಆದರೆ ನಾನು ಮಂತ್ರಿಯಾದಾಗ ಯೋಜನೆಯೊಳಗೆ ಸೇರಿಸಿ ಶಾಶ್ವತ ಪರಿಹಾರ ನೀಡುವ ಸಲುವಾಗಿ 22 ಕೆರೆಗಳಿಗೆ ನೀರುಣಿಸಲು 60 ಕಿಲೋಮೀಟರ್ ಪೈಪ್ ಲೈಲ್ ಅಳವಡಿಸಲಾಗಿದೆ. ಇದು ನಾನು ಮಾಡಿರುವ ಕೆಲಸ. ಇನ್ನು ಶೈಕ್ಷಣಿಕ ಕ್ಷೇತ್ರದಲ್ಲಿ ಹತ್ತು ಹಲವು ಕಾಲೇಜ್ ಗಳು , ವಸತಿ ನಿಲಯಗಳು ಹಾಸ್ಟೆಲ್ ಗಳನ್ನು ತಂದಿದ್ದೇನೆ. ಇನ್ನು ರೈತರ ಉದ್ದಾರಕ್ಕೆ ಬಡವರ ಏಳಿಗೆಗಾಗಿ ಗಂಗಾ ಕಲ್ಯಾಣ ಯೋಜನೆಯಡಿಯಲ್ಲಿ ಮಂಜೂರು ಮಾಡಲಾಗಿರುವ 6 ಸಾವಿರ ಕೊಳವೆ ಬಾವಿಗಳನ್ನು ಕೊರೆಯಲು ಮಂಜೂರು ಮಾಡಿದ್ದರೆ,ಅದನ್ನು ತಡೆ ಹಿಡಿಯುವುದು ಯಾವ ನ್ಯಾಯ ಎಂದು ಪ್ರಶ್ನಿಸಿ ದರು. ಕೂಡಲೇ ಮಂಜೂರಾಗಿರುವ ಕೊಳವೆ ಬಾವಿಗಳನ್ನು ಕೊರೆಯಿಸಲು ಚಂದ್ರಪ್ಪನವರು ಅಧಿಕಾರಿಗಳಿಗೆ ಸೂಚಿಸಬೇಕು ಎಂದು ಮನವಿಯನ್ನೂ ಮಾಡಿದರು. ಮುಂದುವರೆದು ಚಂದ್ರಪ್ಪ ಧೋರಣೆ ಹಾಗೂ ಕೇಂದ್ರ ಸರ್ಕಾರ ಪಟ್ರೋಲ್ ಬೆಲೆ ಏರಿಕೆೆ ಖಂಡಿಸಿ ಸೋಮವಾರ ಪಾದಯಾತ್ರೆ ಮಾಡಲಾಗುತ್ತದೆ ಎಂದರು
ಸಂಯುಕ್ತವಾಣಿ