ವೃದ್ದರು ಮಹಿಳೆಯರು‌ ಮಕ್ಕಳನ್ನು ನೀರಿಗಿಳಿಸಬೇಡಿ

ಜಿಲ್ಲಾ ಸುದ್ದಿ

ಕಳೆದ ಐವತ್ತು ವರ್ಷಗಳಿಂದ ಸೊರಗಿದ್ದ ಕೆರೆಗಳು ಕಟ್ಟೆಗಳು ಇಂದು ತುಂಬಿ ಧಾರಾಕಾರವಾಗಿ ಹರಿಯುತ್ತಿವೆ ಈ ಭಾಗದ ವೇದಾವತಿ ನದಿ ತುಂಬಿ ಹರಿಯುತ್ತಿದೆ ಮಾರಿ ಕಣಿವೆ ಕೆರೆ ಯಾವ ಕ್ಷಣದಲ್ಲಾದರೂ ಕೂಡ ಕೋಡಿಬಿಡಬಹುದು ಇದರಿಂದ ಇನ್ನಷ್ಟು ಜನರಿಗೆ ಕಿರಿಕಿರಿಯಾಗಬಹುದು ಇಂತಹ ಮುಂದಿನ ಎಲ್ಲಾ ಸವಾಲುಗಳನ್ನು ಇಲ್ಲಿನ ಅಧಿಕಾರಿಗಳು ನಿಭಾಯಿಸಬೇಕು ಯಾವುದೇ ಕಾರಣಕ್ಕೂ ಜನರಿಗೆ ಮತ್ತು ಜನಜೀವನಕ್ಕೆ ತೊಂದರೆ ಆಗಬಾರದೆಂದು ವಿಧಾನ ಪರಿಷತ್ ಸದಸ್ಯ  ನವೀನ್ ಹೇಳಿದರು ಪಿ ಮಹದೇವಪುರ ಗ್ರಾಮದಲ್ಲಿ ಎರಡು ಕೆರೆಗಳು ಕೊಡಿ ಬಿದ್ದ ಹಿನ್ನೆಲೆಯಲ್ಲಿ ಬಾಗಿನ ಅರ್ಪಿಸಿ ಮತ್ತು ಬಾಗಿನವನ್ನು ಮಹಿಳೆಯರಿಗೆ ನೀಡಿ ಮಾತನಾಡಿದರು.

 

 

 

ಇದೇ ಸಮಯದಲ್ಲಿ ಮಾತನಾಡಿದ ತಹಶೀಲ್ದಾರ್ ರಘುಮೂರ್ತಿ ನಮ್ಮ ಹಿಂದೂ ಸಂಸ್ಕೃತಿ ವೈಶಿಷ್ಟವಾದದ್ದು ಈ ಸಂಸ್ಕೃತಿ ಮತ್ತು ಧಾರ್ಮಿಕ ನಿಲೆಗಟ್ಟು ದೇಶವನ್ನು ಶ್ರೀಮಂತ ಗೊಳಿಸಿದೆ ಇಂತಹ ಸಂಪ್ರದಾಯಗಳು ಸಮಾಜದಲ್ಲಿ ಮನೆ ಮಾಡಬೇಕು  ಎಂದರು. ಮಳೆಯಿಂದ ಜನರಿಗೆ ಕಿರಿಕಿರಿಯಾದರು ಐವತ್ತು ವರ್ಷಗಳಿಂದ ತುಂಬದಂತ ಕೆಲವು ಕೆರೆಗಳು ತುಂಬಿವೆ ರೈತನ ಮುಖದಲ್ಲಿ ಮಂದಹಾಸ ಬೀರಿದೆ ಇಲ್ಲಿನ ಚುನಾಯಿತ ಪ್ರತಿನಿಧಿಗಳು ಸಾರ್ವಜನಿಕರ ಬಗ್ಗೆ ಅಪಾರವಾದ ಕಾಳಜಿ ಬಂದಿತ್ತು ಯಾವುದೇ ಕಾರಣಕ್ಕೂ ಪ್ರವಾಹದಿಂದ ಸಾರ್ವಜನಿಕರಿಗೆ ತೊಂದರೆಯಾಗದ ರೀತಿಯಲ್ಲಿ ಕೆಲಸ ನಿರ್ವಹಿಸಬೇಕೆಂಬ ಸೂಚನೆ ನೀಡಿದ್ದಾರೆ ಅದರಂತೆ ಜಿಲ್ಲಾಧಿಕಾರಿಗಳು ಕೂಡ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ ಹೀಗಾಗಿ ಪ್ರವಾಹದಿಂದ ಸಾರ್ವಜನಿಕರಿಗೆ ತೊಂದರೆಯಾಗದ ರೀತಿಯಲ್ಲಿ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿದೆ ಅಂದಾಜು ಈ ಚಳ್ಳಕೆರೆ ತಾಲೂಕಿನ 28 ಕಿಲೋಮೀಟರ್ ವ್ಯಾಪ್ತಿಯಲ್ಲಿ ವೇದಾವತಿ ನದಿ ಹರಿಯುತ್ತಿದ್ದು ವಿವಿ ಸಾಗರ ತುಂಬಿದಲ್ಲಿ ಈ ವೇದಾವತಿ ನದಿ ಯ ಹರಿವು ಹೆಚ್ಚಾಗಬಹುದು ಆದರೆ ಭಯಭೀತರಾಗುವ ಅವಶ್ಯಕತೆ ಇಲ್ಲ ತಾಲೂಕು ಆಡಳಿತದಿಂದ ಸಮರ್ಥವಾಗಿ ಪ್ರಸ್ತುತಿಯನ್ನು ನಿಭಾಯಿಸಲಾಗುವುದು ಈ ನದಿ ಪಾತ್ರದಲ್ಲಿ ವೃದ್ಧರು ಮಹಿಳೆಯರು ಮತ್ತು ಮಕ್ಕಳನ್ನು ನೀರಿಗೆ ಇಳಿಸದಂತೆ ಜೋಪಾನವಾಗಿ ನೋಡಿಕೊಳ್ಳಬೇಕೆಂದು ಸಾರ್ವಜನಿಕರಿಗೆ ಮನವಿ ಮಾಡಿದರು ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜೈಪಾಲಯ್ಯ ಬಿಜೆಪಿ ಮಂಡಲ ಅಧ್ಯಕ್ಷ ಸೂರನಹಳ್ಳಿ ಶ್ರೀನಿವಾಸ್ ಸೋಮಶೇಖರ್ ಮಂಡಿ ಮಠ ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ರಾಮದಾಸ್ ಎಸ್ಸಿ ಮೋರ್ಚಾ ಬಾಜಪ ಅಧ್ಯಕ್ಷ ಕರಿಕೆರೆ ತಿಪ್ಪೇಸ್ವಾಮಿ ಭಾಜಪ ಮುಖಂಡರಾದ ಸೋಮಶೇಖರ್ ರೆಡ್ಡಿ ಪಿ ಮಹದೇವಪುರ ಗ್ರಾಮ ಪಂಚಾಯಿತಿ ಅಧ್ಯಕ್ಷರು ಸದಸ್ಯರುಗಳು ಮತ್ತು ಗ್ರಾಮಸ್ಥರುಗಳು ಉಪಸ್ಥಿತರಿದ್ದರು

Leave a Reply

Your email address will not be published. Required fields are marked *