ಹಣವನ್ನು ಮೂರುಪಟ್ಟು ಮಾಡಿಕೊಡುವುದಾಗಿ ನಂಬಿಸಿ ಕರೆಸಿಕೊಂಡು ಹೊಸದುರ್ಗ ದ ಭದ್ರಾ ಕಾಲುವೆ ಬಳಿ ಕೀರ್ತಿರಾಜ್ ನನ್ನು ಕೊಲೆ ಮಾಡಿದ್ದ ನಾಲ್ಕು ಜನ ಆರೋಪಿಗಳನ್ನು ಹೊಸದುರ್ಗ ಪೋಲಿಸರು ಬಂಧಿಸಿದ್ದಾರೆ.
ಹೊಸದುರ್ಗದ ಕಬ್ಬಿನಕೆರೆ ಮತ್ತು ಬಳ್ಳೆಕೆರೆಯ ಭದ್ರಾ ಕಾಲುವೆಯಲ್ಲಿ 30.05.22 ರಂದು ಕೀರ್ತಿರಾಜ್ ಎಂಬ ವ್ಯಕ್ತಿಯ ಮೃತ ದೇಹ ಸಿಕ್ಕಿತ್ತು. ಅದರೆ ಕೀರ್ತಿರಾಜ್ ಸಾಕು ಮಗಳಾದ ಶ್ವೇತ ಅವರು ಈ ಸಾವಿನ ಬಗ್ಗೆ ಕೊಲೆಯ ಶಂಕೆ ವ್ಯಕ್ತಪಡಿಸಿ ಪೋಲಿಸರಿಗೆ ದೂರು ನೀಡಿದ್ದರು. ದೂರು ದಾಖಲಿಸಿಕೊಂಡು ತನಿಖೆಗೆ ಮುಂದಾದ ಪೋಲಿಸರು ತಂಡವೊಂದನ್ನು ಹಿರಿಯೂರು ಡಿವೈಎಸ್ಪಿ ಹಾಗೂ ಹೊಸದುರ್ಗ ಸಿಪಿಐ ನೇತೃತ್ವದಲ್ಲಿ ತಂಡವೊಂದನ್ನು ರಚಿಸಿದ್ದು ತನಿಖೆಯಿಂದ ಕೊಲೆ ಮಾಡಿರುವುದು ಪತ್ತೆಯಾಗಿದ್ದು,ಕೊಲೆ ಮಾಡಿದ ಆರೋಪಿಗಳನ್ನು ಬಂಧಿಸಿದ್ದಾರೆ. ಆರೋಪಿಗಳಾದ ನವೀನ್,ನಾಗರಾಜ, ನಾಗರಾಜಪ್ಪ, ಲೋಕೇಶ್ ಎಂಬುವರನ್ನು ಬಂಧಿಸಿದ್ದಾರೆ. ಇದರಲ್ಲಿಶಿವಣ್ಣ ಎಂಬ ಆರೋಪಿಯು 02-07-22 ರಂದು ಮೃತನಾಗಿದ್ದಾನೆ. ಬಂಧಿತರನ್ನು ನ್ಯಾಯಾಂಗ ಬಂಧನಕ್ಕೆ ಕಳುಹಿಸಿಕೊಡಲಾಗಿದೆ. ಮೇಲಿನ ಆರೋಪಿಗಳೆಲ್ಲರೂ ಕೂಡ ದಾವಣಗೆರೆ, ಚಿಕ್ಕಮಗಳೂರು ಮತ್ತು ಬೆಂಗಳೂರಿನಲ್ಲಿ ಪ್ರಕರಣಗಳನ್ನು ಎದುರಿಸುತ್ತಿದ್ದಾರೆ ಎಂದು ಎಸ್ಪಿ ಕೆ. ಪರುಶುರಾಮ್ ತಿಳಿಸಿದ್ದಾರೆ.
ಸುದ್ದಿಗಾಗಿ ಈ ನಂಬರ್ ಗೆ ಕರೆ ಮಾಡಿ
8660924503