ಜವಾಬ್ದಾರಿ ಹಾಗೂ ಎಚ್ಚರಿಕೆಯಿಂದ ಮತದಾನ ಮಾಡಿ

ಜಿಲ್ಲಾ ಸುದ್ದಿ

ಚಿತ್ರದುರ್ಗ: ಕೊರೊನ ಸಂದರ್ಭದಲ್ಲಿ ಎಚ್ಚರಿಕೆ ಹಾಗೂ ಜವಾಬ್ದಾರಿಯುತವಾಗಿ ಗ್ರಾಪಂ ಚುನಾವಣೆಯಲ್ಲಿ ಮತದಾನ ಮಾಡಿ ಎಂದು ತರಳಬಾಳು ಡಾ.ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮೀಜಿ ಕರೆ ನೀಡಿದರು.

 

 

 

Chitradurga taralabalu swamiji vote casting
ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಬಾಲಕರ ಶಾಲೆಯ ಮತಗಟ್ಟೆಯಲ್ಲಿ ಮತದಾನ ಮಾಡಿ ನಂತರ ಮಾಧ್ಯಮಗಳೊಂದಿಗೆ ಮಾತನಾಡಿ,ಪ್ರಜಾಪ್ರಭುತ್ವದಲ್ಲಿ ಅನುಗುಣವಾಗಿ ತಮ್ಮ ಹಕ್ಕು ಚಲಾಯಿಸಬೇಕು. ಜೊತೆಗೆ ಸ್ವಚ್ಛತೆ ಕಾಪಾಡಿಕೊಳ್ಳಬೇಕು. ವೈಯಕ್ತಿಕ ಜೊತೆಗೆ ದೇಶದ ಆರೋಗ್ಯ ಕಾಪಾಡಬೇಕಾಗಿದೆ.
ತಮ್ಮ ಸ್ವಇಚ್ಛೆಯಿಂದ ಮತ ಚಾಲಾಯಿಸಿ, ಆದರೆ ಬೇರೆಯವರ ಹೇಳಿಕೆಗೆ ಕಿವಿಗೊಡಬೇಡಿ.
ಈ ಸಂದರ್ಭದಲ್ಲಿ ಚಿತ್ರದುರ್ಗದ ಅಸಿಸ್ಟಂಟ್ ಕಮಿಷನರ್ ಡಾ.ನಾಗರಾಜು, ವೃತ್ತ ನಿರೀಕ್ಷಕ ಬಾಲಚಂದ್ರನಾಯಕ್, ರೆವಿನ್ಯ ಅಧಿಕಾರಿ ರಮೇಶ್, ಚುನಾವಣಾಧಿಕಾರಿ ಅಣ್ಣಪ್ಪ.ಕೆ, ಸಹಾಯಕ ಚುನಾವಣಾಧಿಕಾರಿ ಹೆಚ್.ಕೆ., ಗ್ರಾಮಾಂತರ ಠಾಣೆಯ ಸಬ್‌ಇನ್ಸೆಪಕ್ಟರ್ ಯಶೋದಮ್ಮ ಇದ್ದರು.

ಸಂಯುಕ್ತವಾಣಿ

Leave a Reply

Your email address will not be published. Required fields are marked *