ಸ್ಥಳೀಯ ಡಾ. ಬಿ ತಿಪ್ಪೇಸ್ವಾಮಿಗಾಗಿ ಟಿಕೆಟ್ ಕೊಡುವಂತೆ ಚಿತ್ರದುರ್ಗದ ಅಭಿಮಾನಿಗಳ ಕೂಗು

ರಾಜ್ಯ

ಚಿತ್ರದುರ್ಗ ಲೋಕಸಭಾ ಕ್ಷೇತ್ರಕ್ಕೆ ಕಾಂಗ್ರೆಸ್ ಟಿಕೆಟ್ ನ್ನು ಯುವಕ‌ ಹಾಗೂ ಸ್ಥಳೀಯರಾದ ಡಾ. ಬಿ. ತಿಪ್ಪೇಸ್ವಾಮಿಗೆ ನೀಡಬೇಕೆಂದು ಒತ್ತಾಯಿಸಿ ಡಾ. ಬಿ . ತಿಪ್ಪೇಸ್ವಾಮಿ‌ ಅಭಿಮಾನಿ‌ ಬಳಗದ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ನಗರದ ಪ್ರವಾಸಿ ಮಂದಿರದಿಂದ ಕಾಂಗ್ರೆಸ್ ಕಚೇರಿವರೆಗೆ ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಅವರ ಫ್ಲಕ್ಸ್ ಗಳನ್ನು ಹಿಡಿದು ಘೋಷಣೆ ಹಾಕುತ್ತಾ ಮೆರವಣಿಗೆ ನಡೆಸಿದರು. ಸ್ಥಳೀಯರಿಗೆ ಟಿಕೆಟ್ ಕೊಟ್ಟರೆ ಜಿಲ್ಲಾಭಿವೃದ್ದಿಯಾಗುತ್ತದೆ. ಹೊರಗಿನವರು ಬಂದರೆ ಅಭಿವೃದ್ದಿ ಕಾಣುವುದಿಲ್ಲ. ಅದ್ದರಿಂದ ಈ ಬಾರಿ ಕಾಂಗ್ರೆಸ್ ಟಿಕೆಟ್ ನ್ನು ಡಾ. ಬಿ. ತಿಪ್ಪೇಸ್ವಾಮಿಗೆ ಕೊಡಬೇಕೆಂದು ಒತ್ತಾಯಿಸಿದರು. ಇದೇಸಮಯದಲ್ಲಿ ಮಾತಾಡಿದ,ಲಿಡ್ಕರ್ ಮಾಜಿ ಅಧ್ಯಕ್ಷ ಓ.‌ಶಂಕರ್,ಚಿತ್ರದುರ್ಗ ಜಿಲ್ಲೆಯ ಸ್ವಾಭಿಮಾನದ ಪ್ರಶ್ನೆಯಾಗಿದ್ದು, ಸ್ಥಳೀಯರಿಗೆ ಟಿಕೆಟ್ ನೀಡುವಂತೆ ಕೆಪಿಸಿಸಿ ಅಧ್ಯಕ್ಷರು, ಮುಖ್ಯ ಮಂತ್ರಿಗಳು ಹಾಗೂ ದೆಹಲಿಯ ವರಿಷ್ಠರಿಗೂ ಮನವಿ ಮಾಡಿದ್ದೇವೆ. ಎನ್ ಎಸ್ ಯು ಐ ಸೇರಿದಂತೆ ಹಲವು ಹುದ್ದೆಗಳಲ್ಲಿ‌ ಕಾರ್ಯ ನಿರ್ವಹಿಸಿರುವ ಯುವ ಮುಖಂಡ ಡಾ.‌ಬಿ. ತಿಪ್ಪೇಸ್ವಾಮಿಗೆ ಟಿಕೆಟ್ ಕೊಡಬೇಕು.ಸ್ಥಳೀಯರಿಗೆ ಕೊಟ್ಟರೆ ಜಿಲ್ಲೆಯ ಅಭಿವೃದ್ದಿಯಾಗುತ್ತದೆ. ಬದ್ದತೆ ಇರುತ್ತದೆ. ಆದರೆ ಹೊರಗಿನವರಿಗೆ ಬದ್ದತೆ ಇರುವುದಿಲ್ಲ ಎಂದು ಹೇಳಿದರು.

 

 

 

Leave a Reply

Your email address will not be published. Required fields are marked *