ಸಚಿವ ಸಂಪುಟ ವಿಸ್ತರಣೆ ಬಗ್ಗೆ ರಾಮುಲು ಹೇಳಿದ್ದೇನು?

ರಾಜಕೀಯ

ಚಿತ್ರದುರ್ಗ: ಸಚಿವ ಸಂಪುಟ ವಿಸ್ತರಣೆ ಅಥವ ಪುನಾರಚನೆ ಬಗ್ಗೆ ಶೀಘ್ರದಲ್ಲಿಯೇ ಸಿಎಂ ತೀರ್ಮಾನ ತೆಗೆದುಕೊಳ್ಳುತ್ತಾರೆ. ಎಂದು ಸಮಾಜ ಕಲ್ಯಾಣ ಸಚಿವ ಶ್ರೀರಾಮುಲು ಹೇಳಿದರು.

 

 

 

Chitradurga soon cabinet WL expantion
ಅವರು ಚಿತ್ರದುರ್ಗದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿ, ಸಂಪುಟ ವಿಸ್ತರಣೆಯೋ ಅಥವ ಪುನಾರಚನೆಯೋ ಎಂದು ವರಿಷ್ಠರು ಹೇಳಿದ‌ ಮೇಲೆ ಸಿಎಂ ತೀರ್ಮಾನ ತೆಗೆದುಕೊಳ್ಳುತ್ತಾರೆ. ಕೇಂದ್ರದ ನಾಯಕರ ಜೊತೆ ಚರ್ಚೆ ನಡೆಯುತ್ತಿದೆ. ಎಲ್ಲರೂ ಒಗ್ಗಟ್ಟಿನಿಂದ ನಡೆಯುತ್ತಿದ್ದೆವೆ. ನಮ್ಮ ಪಕ್ಷದ ಅಭಿಪ್ರಾಯಕ್ಕೆ ಬದ್ಧ ಸರ್ಕಾರ ದಿವಾಳಿಯಾಗುವ ಪ್ರಶ್ನೆ ಇಲ್ಲ. ಕೋವಿಡ್ ವೇಳೆ ಸಿದ್ದರಾಮಯ್ಯ ಸರ್ಕಾರ ನಡೆಸಿದ್ದರೆ ಇವತ್ತು ಯಾವ ಸ್ಥಿತಿಗೆ ಹೋಗುತ್ತಿತ್ತೋ ಗೊತ್ತಿಲ್ಲ. ಬೇರೆ ರಾಜ್ಯದಲ್ಲಿ ಸರ್ಕಾರಿ ನೌಕರರಿಗೆ ವೇತನ ನೀಡಿಲ್ಲ. ನಮ್ಮ ರಾಜ್ಯದಲ್ಲಿ ಆ ರೀತಿ ಆಗಿಲ್ಲ. ಅಭಿವೃದ್ದಿ ಕೆಲಸಗಳು ಕುಂಠಿತಗೊಂಡಿಲ್ಲ. ಎಲ್ಲವನ್ನು ಸರ್ಕಾರ ಬ್ಯಾಲೆನ್ಸ್ ಮಾಡುತ್ತಿದೆ. ಕೋವಿಡ್ ವ್ಯಾಕ್ಸಿನ್ ಯಾವ ಜಿಲ್ಲೆಯಲ್ಲಿ ಸ್ಟೋರೇಜ್ ಮಾಡಬೇಕು ಎಂದು ಗಮನ ಹರಿಸಿದ್ದೇವೆ. ಕೋವಿಡ್ ಯಾರಿಗೆ ನೀಡಬೇಕು ಎಂದು ವಾರಿಯರ್ಸ್ ಪಟ್ಟಿ ಕೇಂದ್ರಕ್ಕೆ ಕಳುಹಿಸಿದ್ದೆವೆ. ಎಂದು ಶ್ರೀರಾಮುಲು ಹೇಳಿದರು.

ಸಂಯುಕ್ತವಾಣಿ

Leave a Reply

Your email address will not be published. Required fields are marked *