ಚಿತ್ರದುರ್ಗ: ವಿಜಯನಗರ ಪ್ರತ್ಯೇಕ ಜಿಲ್ಲೆ ರಚನೆಗೆ ಶ್ರೀರಾಮುಲು ಪಡೆಗೆ ಹಿನ್ನೆಡೆಯಾಗಿಲ್ಲ ಅದರ ಪ್ರಶ್ನೆಯೇ ಇಲ್ಲ ಎಂದು ಸಮಾಜ ಕಲ್ಯಾಣ ಸಚಿವ ಶ್ರೀರಾಮುಲು ಹೇಳಿದರು.
ಬಳ್ಳಾರಿ 250 km ವ್ಯಾಪ್ತಿಯ ದೊಡ್ಡ ಜಿಲ್ಲೆಯಾಗಿತ್ತು. ಆಡಳಿತಾತ್ಮಕ ದೃಷ್ಠಿಯಿಂದ ಸಿಎಂ ತೀರ್ಮಾನ ತೆಗೆದುಕೊಂಡಿದ್ದಾರೆ. ಹೀಗಾಗಿ ಸಿಎಂ ಸರಿಯಾದ ತೀರ್ಮಾನ ತೆಗೆದುಕೊಂಡಿದ್ದಾರೆ. ಸೋಮಶೇಖರ್ ರೆಡ್ಡಿ ಅವರನ್ನ ನಾನು ಸಿಎಂ ಮನವೊಲಿಸಿದ್ದೇವೆ. ಬಳ್ಳಾರಿ ಜಿಲ್ಲೆ ಅಖಂಡವಾಗಿತ್ತು. ಇಂದು ಪ್ರತ್ಯೇಕವಾಗಿದೆ.ಮೊಳಕಾಲ್ಮೂರು ತಾಲೂಕನ್ನು ಬಳ್ಳಾರಿಗೆ ಸೇರಿಸುವ ತೀರ್ಮಾನ ಸಿಎಂ ತೆಗೆದುಕೊಳ್ಳುತ್ತಾರೆ. ಮೊಳಕಾಲ್ಮೂರಿನ ಜನರು 372 j ಸೇರ್ಪಡೆಗೆ ಬೇಡಿಕೆ ಇಟ್ಟಿದ್ದಾರೆ. ಇದರ ತೀರ್ಮಾನ ಸಿಎಂ ತೆಗೆದುಕೊಳ್ಳುತ್ತಾರೆ. 371j ಆದರೆ ಉತ್ತಮ ಆದರೆ ಅಂತಿಮ ತೀರ್ಮಾನ ಸಿಎಂಗೆ ಬಿಟ್ಟಿದ್ದು ಎಂದು ರಾಮುಲು ಹೇಳಿದರು.
ಸಂಯುಕ್ತವಾಣಿ