ಭವ್ಯ ಭಾರತದ 75ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ
ಚಳ್ಳಕೆರೆ ವಿಧಾನಸಭಾ ಕ್ಷೇತ್ರದ ಶಾಸಕ ಟಿ.ರಘುಮೂರ್ತಿ ಅವರ ನೇತೃತ್ವದಲ್ಲಿ ಹಮ್ಮಿಕೊಂಡಿರುವ ಅಮೃತ ನಡಿಗೆ ಪಾದಯಾತ್ರೆಯು ಆರನೇ ದಿನಕ್ಕೆ ಕಾಲಿಟ್ಟಿದೆ.
ರಾಮಜೋಗಿಹಳ್ಳಿಯಿಂದ ಪ್ರಾರಂಭವಾಗಿರುವ ಪಾದಯಾತ್ರೆಯು ಸಾವಿರಾರು ಕಾರ್ಯಕರ್ತರೊಂದಿಗೆ ಪೇಲಾರಹಟ್ಟಿಯತ್ತ ಸಾಗಿದ್ದು ಭವ್ಯ ಸ್ವಾಗತ ಕೋರಲಾಯಿತು.
ಇಂದಿನ ದಿನದ ಪಾದಯಾತ್ರೆಯು ರಾಮಜೋಗಿಹಳ್ಳಿಯಿಂದ ಪ್ರಾರಂಭವಾಗಿ ಪೇಲಾರಹಟ್ಟಿ, ಹೊಸ ಚೂರಿಪಾಪಯ್ಯನಹಟ್ಟಿ, ಹಳೇ ಚೂರಿಪಾಪಯ್ಯನಹಟ್ಟಿ, ಹಾಯಲ್ಕ್ ಮೂಲಕ ಸಾಗಿ ಬೆಳಗಟ್ಟಕ್ಕೆ ತಲುಪಲಿದೆ.
ಕಾಂಗ್ರೆಸ್ ಮುಖಂಡರ, ಕಾರ್ಯಕರ್ತರ, ಬೆಂಬಲಿಗರ ಹಾಗೂ ಗ್ರಾಮಸ್ಥರ ಬೆಂಬಲದೊಂದಿಗೆ ಪಾದಯಾತ್ರೆಯು ದಿನದಿಂದ ದಿನಕ್ಕೆ ಹೊಸ ರೂಪ ಪಡೆದುಕೊಳ್ಳುತ್ತಿದೆ.