ಹಿಂದೂ ಮಹಾ ಗಣಪತಿಯ ಗೋ ಪೂಜೆ ಹಾಗೂ‌ ಧ್ವಜ ಪೂಜೆ ನೆರವೇರಿಸಿದ ಶಾಸಕ‌ ತಿಪ್ಪಾರೆಡ್ಡಿ

ಆರೋಗ್ಯ ಜಿಲ್ಲಾ ಸುದ್ದಿ

ರಾಜ್ಯದಲ್ಲಿಯೇ ಖ್ಯಾತಿಯನ್ನು ಪಡೆದಿರುವ ವಿಶ್ವ ಹಿಂದು ಪರಿಷತ್ ಹಾಗೂ ಭಜರಂಗ ದಳದ ನೇತೃತ್ವದಲ್ಲಿ ನಡೆಯುವ ಹಿಂದೂ‌ಮಹಾ ಗಣಪತಿ ಆಚರಣೆಗೆ ಸಕಲ‌ಸಿದ್ದತೆಗಳು ನಡೆದಿದ್ದು, ಇಂದು ಗಣಪತಿ ಪ್ರತಿಷ್ಠಾಪನಾ ಸ್ಥಳದಲ್ಲಿ ಧ್ವಜ ಹಾಗೂ ಗೋ‌ಪೂಜೆಯನ್ನು‌ ನೆರವೇರಿಸಲಾಯಿತು.

 

 

 

ನಗರದ ಬಿ ಡಿ‌ ರಸ್ತೆಯಲ್ಲಿರುವ ಜೈನ ಧಾಮದಲ್ಲಿ ಕಳೆದ ವರ್ಷದಿಂದ ಪ್ರತಿಷ್ಠಾಪಿಸಲಾಗುವ ಹಿಂದೂ‌ ಮಹಾ ಸಭಾ ಗಣಪತಿ ಆಚರಣೆಯನ್ನು ಈ ಬಾರಿಯೂ ಮಾಡಲಾಗುತ್ತದೆ.‌ ಈ‌ ಹಿನ್ನೆಲೆಯಲ್ಲಿ ಇಂದು ಚಿತ್ರದುರ್ಗ ಶಾಸಕ ತಿಪ್ಪಾರೆಡ್ಡಿ, ಭಜರಂಗ ದಳ‌ ಹಾಗೂ ವಿಶ್ವ ಹಿಂದೂ ಪರಿಷತ್ ಮುಖಂಡರು ಕಾರ್ಯಕರ್ತರು ಒಟ್ಟಾಗಿ ಸೇರಿ ಧ್ವಜ ಪೂಜೆಯನ್ನು ಮಾಡಿ ಧ್ವಜವನ್ನು ಹಾರಿಸಿದರು. ನಂತರ ಗೋವನ್ನು ಕರೆಯಿಸಿ‌ ಗೋವಿಗೆ ವಿಶೇಷ ಪೂಜೆಯನ್ನು ನೆವೇರಿಸಿದರು.
ಈ ಸಮಯದಲ್ಲಿ ಶಾಸಕ ತಿಪ್ಪಾರೆಡ್ಡಿ ಕೂಡಾದ ಮಾಜಿ ಅಧ್ಯಕ್ಷ ಬದರಿನಾಥ್, ಹಾಗು ಇನ್ನಿತರರು ಉಪಸ್ಥಿತರಿದ್ದರು

Leave a Reply

Your email address will not be published. Required fields are marked *