ಚಿತ್ರದುರ್ಗದ ಹೈವೇಗಳಲ್ಲಿ
ಕಳೆದ 15 ದಿನಗಳಲ್ಲಿ ನಾಲ್ಕು ಹೈವೇ ದರೋಡೆಗಳು ಪ್ರಕರಣಗಳು ನಡೆದಿದ್ದು, ಇನ್ನೊಂದು ಸ್ವಲ್ಪದರಲ್ಲಿ ಮಿಸ್ ಆಗಿ ಆರೋಪಿಗಳು ಜೈಲು ಪಾಲಾಗಿದ್ದಾರೆ. ಈ ವಿಷಯ ಕೇಳಿ ಜನರು ಬೆಚ್ಚಿ ಬಿದ್ದಿದ್ದಾರೆ.
ಚಿತ್ರದುರ್ಗದ ಕ್ಯಾದಿಗೆರೆ, ಸೀಬಾರ ಭರಮಸಾಗರದವರೆಗೂ ದರೋಡೆಗೆ ಸಂಚು ರೂಪಿಸುತ್ತಿರುತ್ತಾರೆ, ನಿರ್ಜನ ಪ್ರದೇಶಗಳೆ ಇವರ ಟಾರ್ಗೇಟ್ ಆಗಿದ್ದು ದರೋಡೆ ಮಾಡಲು ಮುಂದಾಗುತ್ತಾರೆ. ಇದರಿಂದ ಸಾರ್ವಜನಿಕರಲ್ಲಿ ಭಯದ ವಾತಾವರಣ ಉಂಟಾಗಿದೆ. ಭರಮಸಾಗರದ ಬಳಿ ಲಕ್ಷಾಂತರ ಮೌಲ್ಯದ ವಸ್ತುಗಳನ್ನು ದರೋಡೆ ಮಾಡಿದ್ದು, ಲಾರಿ ಚಾಲಕ ಮತ್ತು ಕ್ಲೀನರ್ ಗಳ ಕೈ ಕಾಲು ಕಟ್ಟಿ ಹಾಕಿ 64 ಲಕ್ಷ ಮೌಲ್ಯದ ಇಲೆಕ್ಟ್ರಾನಿಕ್ ವಸ್ತುಗಳನ್ನು ಕಳುವು ಮಾಡಿದ್ದರು,ಪ್ರೇಮಿಗಳಿಬ್ಬರನ್ನು ಬೆದರಿಸಿ ಲ್ಯಾಪ್ ಟಾಪ್ ವೆಬ್ ಕ್ಯಾಮ್ ಹಾಗೂ ಮೊಬೈಲ್ ಸೇರಿ ಹಲವು ವಸ್ತುಗಳನ್ನು ದೋಚಿದ್ದರು, ರಾಷ್ಟ್ರೀಯ ಹೆದ್ದಾರಿ ಕಲ್ಕುಂಟೆ ಬಳಿ ಲಾರಿಗೆ ಅಡ್ಡಗಟ್ಟಿ, ಲಾಂಗ್ ಮಚ್ಚು ತೋರಿಸಿ ಲಕ್ಷಾಂತರ ಮೌಲ್ಯದ ವಸ್ತುಗಳನ್ನು ದರೋಡೆ ಮಾಡಿದ್ದರು, ಹಗಲು ರಾತ್ರಿಯನ್ನದೆ ಹೈವೇಗಳಲ್ಲಿ ಓಡಾಡುವವರು ಎಚ್ಚರಿಕೆ ಹಾಗೂ ಹುಷಾರಿನಿಂದ ಓಡಾಡಬೇಕಾಗಿದೆ.
ಸುದ್ದಿಗಳಿಗಾಗಿ ಮೊಬೈಲ್ ನಂಬರ್ ಸಂಪರ್ಕಿಸಿ: 8660924503