ಬೆಂಗಳೂರು ಶಾಸಕರ ಕೊಲೆ ಸುಪಾರಿ ಪ್ರಕರಣ : ಇಬ್ಬರು ಆರೋಪಿಗಳ ಬಂಧನ
ಬೆಂಗಳೂರಿನ ಬೊಮ್ಮೇನಹಳ್ಳಿ ಎಂಎಲ್ ಎ ಸತೀಶ್ ರೆಡ್ಡಿ ಕೊಲೆ ಸುಪಾರಿ ಪ್ರಕರಣಕ್ಕೆ ಸಂಬಂಧಿಸಿದಂತೆ ಹೊಳಲ್ಕೆರೆ ತಾಲೂಕಿನ ಉಗಣೇಕಟ್ಟೆ ಗ್ರಾಮದಲ್ಲಿ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ.
ಬಂಧಿತರನ್ನು ಬೆಂಗಳೂರಿನ ಪೊಲೀಸರು ಬಂಧಿಸಿದ್ದು, ಬಂಧಿತರನ್ನು ಉಗಣೇಕಟ್ಟೆಯ ಗಿರೀಶ್ ಎಂದು ಮತ್ತೋರ್ವ ಅಪ್ರಾಪ್ತ ವಯಸ್ಕ ಎಂದು ತಿಳಿದು ಬಂದಿದೆ.ಈ ಇಬ್ಬರನ್ನು ಬಂಧಿಸಿರುವ ಹೆಬ್ಬಗೋಡಿ ಪೊಲೀಸರು ಬೆಂಗಳೂರಿಗೆ ಕರೆದೊಯ್ಯದಿದ್ದಾರೆ. ಈ ಹಿಂದೆ ಕಾರ್ಪೋರೇಟರ್ ಮರ್ಡರ್ ಕೇಸ್ ನಲ್ಲೂ ಕೂಡ ಈ ಗಿರೀಶ ನನ್ನು ಹೆಬ್ಬಗೋಡಿ ಪೊಲೀಸರು ಬಂಧಿಸಿದ್ದಾರೆ.