ಅಖಿಲ ಭಾರತ ಶ್ರೀ ಕೃಷ್ಣ ಯಾದವ ಮಹಾ ಸಂಸ್ಥಾನದಲ್ಲಿ ನಡೆದ ಶ್ರೀ ಕೃಷ್ಣಾಷ್ಠಮಿ ಅಂಗವಾಗಿ ಇಂದು ಮಠದ ಆವರಣದಿಂದ ಹೊರಟ ಬೈಕ್ ರ್ಯಾಲಿಗೆ ವಿಧಾನ ಪರಿಷತ್ ಮಾಜಿ ಸದಸ್ಯ ರಘು ಆಚಾರ್ ಚಾಲನೆ ನೀಡಿದರು.
ಬೈಕ್ ರ್ಯಾಲಿಯೂ ನಗರದ ಪ್ರಮುಖ ರಸ್ತೆಗಳಲ್ಲಿ ಸಾಗಿತು. ಶ್ರೀ ಕೃಷ್ಣನಿಗೆ ಜಯಕಾರ ಹಾಕುತ್ತಾ ಮಠದ ಭಕ್ತರು ಹಾಗೂ ಯಾದವ ಸಮುದಾಯದ ಯುವಕರು, ಮುಖಂಡರು ರ್ಯಾಲಿಯಲ್ಲಿ ಸಾಗಿದರು.