ಬಿಜೆಪಿ ಸುಳ್ಳು ಹೇಳದೆ ಬದುಕಲು ಸಾಧ್ಯವಿಲ್ಲ, ಸುಳ್ಳೆ ಅವರ ಮನೆದೇವರು: ಡಿಕೆಶಿ

ರಾಜ್ಯ

*ಬಿಜೆಪಿ ಸುಳ್ಳು ಹೇಳದೆ ಬದುಕಲು ಸಾಧ್ಯವಿಲ್ಲ,

     ಸುಳ್ಳೆ ಅವರ ಮನೆದೇವರು: ಡಿಕೆಶಿ*

ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿ ಸುಳ್ಳು ಹೇಳದೆ ಬದುಕಲು ಸಾಧ್ಯವಿಲ್ಲ ಸುಳ್ಳೆ ಅವರ ಮನೆದೇವರು ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹೇಳಿದರು.

 

 

 

 

ಚಿತ್ರದುರ್ಗದಲ್ಲಿ ಹಮ್ಮಿಕೊಂಡಿದ್ದ ಎಸ್ಪಿ ಮತ್ತು ಎಸ್ಟಿ ಸಮುದಾಯದ ಐಕ್ಯತಾ ಸಮಾವೇಶದಲ್ಲಿ ಪಾಲ್ಗೊಂಡು ಮಾತನಾಡಿದ ಅವರು ಕಾಂಗ್ರೆಸ್ ಶಕ್ತಿ ದೇಶದ ಶಕ್ತಿಯಾಗಿದ್ದು ಇಂತಹ ಐತಿಹಾಸಿಕ ಸಮಾವೇಶ ಎಲ್ಲಾ ಪಕ್ಷಗಳಿಗೆ ಸಂದೇಶ ಕೊಡುತ್ತಿದೆ. ದೇಶಕ್ಕೆ ಸ್ವಾತಂತ್ರ್ಯ ಬಂದಾಗಿನಿಂದಲೂ ದಲಿತರ ಶಕ್ತಿಯಾಗಿ ಅವರ ಜೊತೆ ಕಾಂಗ್ರೆಸ್ ನಿಂತಿದೆ ಎಂದು ಹೇಳಿದರು.

ಪರಿಶಿಷ್ಟ ಪಂಗಡ ಮತ್ತು ಪರಿಶಿಷ್ಟ ಜಾತಿ ಎಂದರೆ ಕಾಂಗ್ರೆಸ್ ಪಕ್ಷ. ಪರಿಶಿಷ್ಟ ವರ್ಗ ಕಾಂಗ್ರೆಸ್ ನ ಬುನಾದಿ ಎಂದು ಹೇಳಿದರು.ಈ ದೇಶದ ಇತಿಹಾಸ ಮಹಾತ್ಮಾ ಗಾಂಧಿಜಿ, ಸುಭಾಷ್ ಚಂದ್ರಬೋಸ್, ಬಾಬು ಜಗಜೀವನ್ ರಾಂ, ರಾಜೀವ್, ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಅಲಂಕಾರಿಸಿದ್ದ ಸ್ಥಾನವನ್ನು ನಮ್ಮ ರಾಜ್ಯದ ಖರ್ಗೆ ಅಲಂಕಾರಿಸಿದ್ದಾರೆ ಎಂದು ಡಿಕೆಶಿ ಹೇಳಿದರು. 50 ವರ್ಷಗಳ ಕಾಂಗ್ರೆಸ್ ಪಕ್ಷಕ್ಕೆ ದುಡಿದ ಕಾರಣಕ್ಕೆ ಅವರ ಹಿರಿತನಕ್ಕೆ ಸಿಕ್ಕ ಗೌರವವಾಗಿದೆ.
ರಾಜ್ಯದಲ್ಲಿ 136 ಸ್ಥಾನ ಗಳಿಸಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರಲಿದ್ದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಇನ್ನು ಚಿತ್ರದುರ್ಗದ ನಿರ್ಣಯಗಳಿಗೆ ಕಾಂಗ್ರೆಸ್ ಪಕ್ಷ ಬದ್ದವಾಗಿದೆ. ಬಿಜೆಪಿ ಸುಳ್ಳು ಹೇಳದೆ ಬದುಕಲು ಸಾಧ್ಯವಿಲ್ಲ. ಸುಳ್ಳೆ ಅವರ ಮನೆದೇವರು, ಸುಳ್ಳಿನ ಕಂತೆಗೆ ನೀವು ಬಲಿಯಾಗಬೇಡಿ ಅವರು ನಿಮ್ಮನ್ನು ದಾರಿ ತಪ್ಪುಸುತ್ತಿದ್ದಾರೆ ಎಂದರು. ಚುನಾವಣೆಯಲ್ಲಿ ಕೊಟ್ಟ ಭರವಸೆಯನ್ನು ಬಿಜೆಪಿ ಪಕ್ಷ ಈಡೇರಿಸಿಲ್ಲ ಎಂದು ಬಿಜೆಪಿ ವಿರುದ್ಧ ಕುಟುಕಿದರು.ಒಂದು ವರ್ಷದ ಹಿಂದೆ ಮೇಕೆದಾಟು ಹೋರಾಟ, ದಾವಣಗೆರೆಯಲ್ಲಿ ಸಿದ್ದರಾಮಯ್ಯ ಹುಟ್ಟುಹಬ್ಬ . ಈಗ ಐಕ್ಯತಾ ಯಾತ್ರೆ ಹಮ್ಮಿಕೊಳ್ಳಲಾಗಿತ್ತು. ಇಂದು ಚಿತ್ರದುರ್ಗದಲ್ಲಿ ಎಸ್ಸಿ ಎಸ್ಟಿ ಐಕ್ಯತಾ ಸಮಾವೇಶ ಹಮ್ಮಿಕೊಳ್ಳಲಾಗಿದೆ. ಇದೇ ಜನವರಿ16 ರಂದು ಮಹಿಳೆಗೆ ಶಕ್ತಿ ತುಂಬುವ ಉದ್ದೇಶದಿಂದ ಮಹಿಳಾ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದರು.
ಮಹಿಳೆಯರಿಗೆ ಪ್ರತ್ಯೇಕ ಪ್ರಣಾಳಿಕೆ ಮಾಡಲು ಕಾಂಗ್ರೆಸ್ ಅಲೋಚನೆ ಮಾಡಿದೆ. ಪ್ರತಿ ಪಂಚಾಯತಿಯಿಂದ ಇಬ್ಬರು ಮಹಿಳೆಯರು ಬರಬೇಕು ಎಂದು ಡಿಕೆಶಿ ಹೇಳಿದರು.ಕಾಂಗ್ರೆಸ್ ಪಕ್ಷದ ಅಡಿಪಾಯವಾಗಿ ಈ ಸಮುದಾಯಗಳು ನಿಂತಿವೆ, ರಾಜ್ಯ ಮತ್ತು ಕೇಂದ್ರದಲ್ಲಿ ಬಿಜೆಪಿ ಮೊಸಳೆ ಕಣ್ಣೀರು ಸುರಿಸುತ್ತಿದೆ ಎಂದು ಮಾಜಿ ಉಪ ಮುಖ್ಯ ಮಂತ್ರಿ ಡಾ. ಜಿ. ಪರಮೇಶ್ವರ್ ಹೇಳಿದರು. ನಮ್ಮ ಸಮುದಾಯಗಳ ಬಗ್ಗೆ ಮೊಸಳೆ ಕಣ್ಣೀರು ಸುರಿಸುತ್ತಿದ್ದಾರೆ. ಅಂಬೇಡ್ಕರ್ ಅವರ ಸಂವಿಧಾನ ಬದಲಾವಣೆ ಮಾಡುತ್ತೇವೆ ಎನ್ನುತ್ತಾರೆ, ಸಂವಿಧಾನ ಮುಟ್ಟಿದ್ರೆ ದೊಡ್ಡ ಆಂದೋಲನ ಆಗುತ್ತದೆ ಎಂದು ಎಚ್ಚರಿಕೆ ನೀಡಿದರು. ಇದು ವಿಶ್ವದಲ್ಲಿ ಅತೀ ದೊಡ್ಡ ಸಂವಿಧಾನ, ಇಂತಹ ಸಂವಿಧಾನವನ್ನು ಮುಟ್ಟಿದರೆ ನಾವು ಯಾರೋ ಸುಮ್ಮನಿರಲ್ಲ ನೆನಪಿರಲಿ, ರಾಜ್ಯದಲ್ಲಿ ನಮ್ಮ ಸರ್ಕಾರ ಇದ್ದಾಗ ಎಸ್ಸಿ ಎಸ್ಟಿ ಏಳ್ಗೆಗಾಗಿ ಜನ ಸಂಖ್ಯೆ ಅನುಗುಣವಾಗಿ ಹಣ ತೆಗೆದು ಇಟ್ಟಿದ್ದೇವೆ. 24.1% ರಷ್ಟು ಜನ ಸಂಖ್ಯೆಗೆ 88 ಸಾವಿರ ಕೋಟೊ ನಾವು ನೀಡಿದ್ದೇವೆ, ಇಂದು ಬಿಜೆಪಿ ಸರ್ಕಾರ 21-22 ರ ಅಯವ್ಯಯದಲ್ಲಿ ಬಜೆಟ್ ನೀಡಿದ್ದಾರೆ. ನಮಗೆ ನೀಡಬೇಕಿದ್ದ ಹಣ 42 ಸಾವಿರ ಕೋಟಿ ರೂ ನೀಡಬೇಕಿತ್ತು. ಸಿಎಂ ಬೊಮ್ಮಾಯಿ ಕೇವಲ 28 ಸಾವಿರ ಕೋಟಿ‌ ನೀಡಿದ್ದಾರೆ. ಕಾನೂನಿನ ಉಲ್ಲಂಘನೆಯಾಗಿದೆ ಜನರಿಗೆ ಮೋಸ ಮಾಡಿದ್ದೀರಿ, ಎಸ್ಸಿ ಎಸ್ಟಿ ಸಮುದಾಯಗಳಿಗೆ ಮೀಸಲಾತಿ ನೀಡುತ್ತೇವೆ ಎಂದು ಹೇಳುತ್ತೀರಿ ಆದರೆ ಕೇಂದ್ರದ ನಿಮ್ಮದೆ ಸರಕಾರ ಮಾಡಲು ಬರುವುದಿಲ್ಲ ಎಂದು ಹೇಳುತ್ತಾರೆ,ಬರುವ ಚುನಾವಣೆಯಲ್ಲಿ ಬಿಜೆಪಿಗೆ ಯಾರೂ ಮತ ಹಾಕಬೇಡಿ, ನಮ್ಮ ಏಳ್ಗೆ ಬಯಸದವರಿಗೆ ನಾವು ಮತ ಹಾಕಬಾರದು ಎಂದು ಕರೆ ನೀಡಿದರು.

 

Leave a Reply

Your email address will not be published. Required fields are marked *