ತಿಹಾರ್ ಜೈಲಿಗೆ ಹೋಗಿ ಬಂದ ಭ್ರಷ್ಟರೊಬ್ಬರು ಬಿಜೆಪಿಗೆ ಭ್ರಷ್ಟ ಜನೋತ್ಸವ ಎಂದು ಕರೆಯುತ್ತಾರೆ, ಅವರು ಯಾವ ನೈತಿಕತೆ ಇಟ್ಟುಕೊಂಡು ಆರೋಪ ಮಾಡುತ್ತಾರೆ ಎಂದು ಮಾಜಿ ಸಚಿವ ಕೆ ಎಸ್ ಈಶ್ವರಪ್ಪ ಕಿಡಿ ಕಾರಿದರು.
ಅವರು ಚಿತ್ರದುರ್ಗದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದರು. ಜನೋತ್ಸವವನ್ನು ಭ್ರಷ್ಟೋತ್ಸವ ಎಂದು ಕರೆಯುವುದು ಸರಿಯಲ್ಲ, ಎಂದು ಡಿಕೆಶಿವಿರುದ್ಧ ಏಕವಚನ ದಲ್ಲಿಯೇ ವಾಗ್ದಾಳಿ ನಡೆಸಿದರು.
ಡಿಕೆಶಿ ಮತ್ತು ಸಿದ್ದರಾಮಯ್ಯ ಅವರುಗಳ ಹೇಳಿಕೆ ಸರಿಯಲ್ಲ, ಬಿಜೆಪಿ ಸರ್ಕಾರದ ಸಚಿವರು ಭ್ರಷ್ಟಾಚಾರದಲ್ಲಿದ್ದರೆ ಹೇಳಿ,ಸೋನಿಯಾ ಗಾಂಧಿ, ರಾಹುಲ್ ಗಾಂಧಿ ದೇವತೆಗಳೇ ಎಂದು ಪ್ರಶ್ನಿಸಿದರು.ಕಾಂಗ್ರೆಸ್ ಪಕ್ಷದ ಪ್ರಕಾರ ಇವರಿಬ್ಬರು ದೇವರೇ? ಇಡಿ ವಿಚಾರಣೆಗೆ ಸೋನಿಯಾ ರಾಹುಲ್ ರನ್ನು ಕರೆಯಬಾರದ? ಡಿಕೆಶಿ ಇನ್ನು ಬೇಲ್ ಮೇಲಿದ್ದಾರೆ ಅವರು ಮತ್ತೆ ಜೈಲಿಗೆ ಹೋಗುತ್ತಾರೋ ಗೊತ್ತಿಲ್ಲ, ಜಮೀರ್ ಆಹಮದ್ ಅಂತಹ ಬ್ರೋಕರ್ ನನ್ನು ಬಳಸಿಕೊಳ್ತಾ ಇದಾರೆ, ಸಿದ್ದರಾಮಯ್ಯ ಮುಂದಿನ ಸಿಎಂ ಎಂದು ಹೇಳಿಸುತ್ತಾರೆ. ಬಾಯಿ ಮುಚ್ಚಿಕೊಂಡಿರುವಂತೆ ಹೇಳಿದರೆ ನಾನು ಸಾಯೋವರೆಗೂ ಬಾಯಿ ಮುಚ್ಚಲ್ಲ ಎನ್ನುತ್ತಾದೆ. ಇಂತವರನ್ನು ಜನ ಸಿಎಂ ಮಾಡುತ್ತಾರೆಯೇ ಎಂದು ಆಕ್ರೋಶ ವ್ಯಕ್ತಪಡಿಸಿದರು.