ವೀರ ಶೈವ ಲಿಂಗಾಯಿತ ಸಮುದಾಯಕ್ಕೆ ಸಿಎಂ ಡಿಸಿಎಂ ಸ್ಥಾನ‌ ನೀಡಿ

ರಾಜಕೀಯ

ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದ್ದು, ಮುಖ್ಯಮಂತ್ರಿ ಅಥವ ಉಪ‌ಮುಖ್ಯ ಮಂತ್ರಿ ಸ್ಥಾನವನ್ನು ವೀರಶೈವ ಲಿಂಗಾಯಿತ ಸಮುದಾಯಕ್ಕೆ ನೀಡಬೇಕು ಎಂದು ಅಖಿಲ ಭಾರತ ವೀರಶೈವ ಲಿಂಗಾಯಿತ ಮಹಾ ಸಭಾದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಹೇಶ್ ಆಗ್ರಹಿಸಿದ್ದಾರೆ.ರಾಜ್ಯದಾದ್ಯಂತ ವೀರಶೈವ ಲಿಂಗಾಯಿತ ಸಮುದಾ ಯದ ಶಾಸಕರು ಒಟ್ಟು 34 ಜನರಿದ್ದಾರೆ. ಹಿಂದೆ ವೀರೇಂದ್ರ ಪಾಟೀ ಲ್ ಅವರಿಗೆ ಮುಖ್ಯ ಮಂತ್ರಿಯನ್ನಾಗಿ ಕಾಂಗ್ರೆ ಸ್ ನಿಂದ ಮಾಡಲಾಗಿತ್ತು. ಅಲ್ಲಿಂದ ಇಲ್ಲಿಯವರೆಗೂ ಕೂಡ ವೀರ ಶೈವ ಲಿಂಗಾ ಯಿತ ಸಮುದಾಯಕ್ಕೆ ಸಿಎಂ ಸ್ಥಾನ ಸಿಕ್ಕಿಲ್ಲ, ಉಪಮುಖ್ಯ ಮಂತ್ರಿ ಸ್ಥಾನವು ಸಿಕ್ಕಿಲ್ಲ, ಈ ಎರಡು ಸ್ಥಾನಗಳಲ್ಲಿ ಯಾವುದಾದರು ಒಂದು ಸ್ಥಾನವನ್ನು ನೀಡಬೇಕು. ಡಿ‌.ಕೆ. ಶಿವಕುಮಾರ್ ಮತ್ತು ಸಿದ್ದರಾಮಯ್ಯ ಅವರನ್ನು ಬದಿಗಿರಿಸಿ ಕೊಡಿ ಎಂದು ಕೇಳುತ್ತಿಲ್ಲ, ಆದರೆ ಅವಕಾಶವಿದ್ದಾಗ ಕೊಡಿ ಎಂದು ಕೂಡ ಮನವಿ ಮಾಡುತ್ತಿದ್ದೇವೆ. ಈಶ್ವರ್ ಖಂಡ್ರೆ, ಎಸ್ ಎಸ್ ಮಲ್ಲಿಕಾರ್ಜುನ್ ಹಾಗೂ ಎಂ.ಬಿ ಪಾಟೀಲ್
ಇದ್ದಾರೆ ಇವರನ್ನು ಪರಿಗಣಿ ಸಬಹುದು ಎಂದು ಆಗ್ರಹಿ ಸಿದ್ದಾರೆ.ಈ ಸಂದರ್ಭದಲ್ಲಿ ಜಿಲ್ಲಾ ವೀರಶೈವ ಲಿಂಗಾಯಿತ ಮಹಾಸಭಾದ ಪ್ರಧಾನ ಕಾರ್ಯದರ್ಶಿ ಮಹೇಶ್, ಜಿಲ್ಲಾ ಯುವ ಘಟಕದ ಬಿವಿಕೆಎಸ್ ಕಾರ್ತಿಕ್, ವಾಣಿಜ್ಯ ಘಟಕದ ಟಿ.‌ದಯಾನಂದ್ ಪಾಟೀಲ್, ಜಿಲ್ಲಾ ಖಾಜಾಂಚಿ ದಿವಾಕರ್ ಸಂಕೋಳ್, ಜೆಎಂ ಶಿವಾನಂದ್ ಇದ್ದರು

 

 

 

Leave a Reply

Your email address will not be published. Required fields are marked *