ಸಿದ್ದರಾಮಯ್ಯ ಅವರನ್ನು‌ ಮುಟ್ಟಿದರೆ ದೊಡ್ಡ ಕ್ರಾಂತಿ ಆಗುತ್ತದೆ

ರಾಜಕೀಯ

ಸಿದ್ದರಾಮಯ್ಯ ಯಡಿಯೂರಪ್ಪ ಅವರಷ್ಠು ಹಠಮಾರಿಯಲ್ಲ ಯಡಿಯೂರಪ್ಪ ಸ್ವಭಾವ ನನಗೂ ಗೊತ್ತು, ಅವರು ಬಹಳ ಹಠ ಮಾರಿ ಇಂದು ಮಡಿಕೇರಿ ಚಲೋ ಆಗಿದ್ದು, ವಿಪಕ್ಷ ನಾಯಕರ ಮೇಲೆ ಮೊಟ್ಟೆ ಎಸೆಯುವ ಕೆಲಸ ಮಾಡಿದ್ದರಿಂದ ಈ ಘಟನೆಗೆ ಮುಖ್ಯಮಂತ್ರಿಗಳು ಹಾಗೂ ಗೃಹ ಸಚಿವರು ಕಾರಣ ಎಂದು ಕಾಂಗ್ರೆಸ್ ಚುನಾವಣಾ ಪ್ರಚಾರ ಸಮಿತಿ ಅಧ್ಯಕ್ಷ ಎಂ ಬಿ ಪಾಟೀಲ್ ಹೇಳಿದರು.ಅವರು ಚಿತ್ರದುರ್ಗದಲ್ಲಿ ಮಾತನಾಡಿದರು. ಯಡಿಯೂರಪ್ಪ ಅವರಿಗೆ ಇದನ್ನ ಹೇಳಿ ಭದ್ರತಾ ವೈಫಲ್ಯದಿಂದ ಚಿಲ್ಲರೆ ಕೆಲಸಗಳಿಂದ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ಗೃಹ ಮಂತ್ರಿ ಅವರು ತಮ್ಮ ಕಾರ್ಯನಿರ್ವಹಿಸುವಲ್ಲಿ ಅಸಮರ್ಥರು, ಅನ್ ಪಿಟ್ ಆಗಿದ್ದಾರೆ ಎಂದರು.


ರಾಜ್ಯದ ಜನತೆಗೆ ಸಿದ್ದರಾಮಯ್ಯ ಯೋಗ್ಯತೆ ಏನೂ, ಪ್ರತಾಪ್ ಸಿಂಹ ಯೋಗ್ಯತೆ ಏನೂ ಎಂದು ಗೊತ್ತಿದೆ.ರಾಜ್ಯದಲ್ಲಿ ಭಾವನೆ ಕದಡುವ ಕೆಲಸ ಬಿಟ್ಟು, ಜನರ ಬದುಕು ಕಟ್ಟುವ ಕೆಲಸ ಮಾಡಿ ಪ್ರತಾಪ್ ಸಿಂಹ.ಮೊಟ್ಟೆ ಎಸೆತ, ಸಾವರ್ಕರ್ ಫೋಟೋ ಬರೀ ಇದೆ ಆಯ್ತು, ಇದರಿಂದ ಹೊಟ್ಟೆ ತುಂಬಲ್ಲ. ಇದು ಭಾವನೆ ಕೆರಳಿಸುವ ಕೆಲಸ ಯಾಕೆ ಮಾಡುತ್ತೀದ್ದೀರಾ ಅಂದರೆ ನಿಮ್ಮ ವೈಪಲ್ಯ ಮುಚ್ಚಿಕೊಳ್ಳಲು ಈ ಕೆಲಸ ಮಾಡುತ್ತಿದ್ದಿರಾ ಎಂದು ಪ್ರಶ್ನಿಸಿದರು. ಸಾವರ್ಕರ್ ಸ್ವಾತಂತ್ರ್ಯ ಹೋರಾಟ ಮಾಡಿದ್ದಾರೆ ಇದು ಐತಿಹಾಸಿಕ ಸತ್ಯ ಇದಕ್ಕೆ ನಮ್ಮಲ್ಲಿ ಯಾವುದೇ ಭಿನ್ನಾಭಿಪ್ರಾಯ ಇಲ್ಲ.
ಸಾವರ್ಕರ್ ಅವರು ಬ್ರಿಟಿಷ್ ರಿಗೆ ತಪ್ಪೋಪ್ಪಿಗೆ ಪತ್ರ ಬರೆದುಕೊಟ್ಟಿದ್ದು ಕೂಡ ಐತಿಹಾಸಿಕ ಸತ್ಯ ಸಾವರ್ಕರ್ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿ ಜೈಲಿಗೆ ಹೋಗಿದ್ದರು. ನಂತರ ತಪ್ಪೋಪ್ಪಿಗೆ ಪತ್ರವನ್ನೂ ಕೂಡಾ ಬರೆದಿದ್ದು ಅಷ್ಟೇ ಸತ್ಯ ಎಂದರು.

 

 

 

ಎಸಿಬಿ ವಿಚಾರಕ್ಕೆ ಎಂ.ಬಿ.ಪಾಟೀಲ್ ಪ್ರತಿಕ್ರಿಯೆ.ನನಗೆ ಒಬ್ಬ ಹಿರಿಯ ವಕೀಲರು ಹೇಳಿದ್ದಾರೆ. ಎಸಿಬಿಗೆ ಸಪರೇಟ್ ಇರಬೇಕು ಎಂದು ಇದಕ್ಕೆ ಸರ್ಕಾರವೇ ಬೆಂಬಲಿಸಿದೆ. ಇದನ್ನು ನನಗೆ ತುಂಬಾ ಹಿರಿಯ ವಕೀಲರು ಹೇಳಿದ್ದಾರೆ.ಇದನ್ನ ನಾನು ವಿ.ಪಕ್ಷದ ನಾಯಕರಿಗೆ ಈ ವಿಚಾರ ಹೇಳಲು ಆಗಿಲ್ಲ.ಇದೀಗ ಸುಮ್ಮನೇ ಸುಪ್ರೀಂ ಕೋರ್ಟ್ ಗೆ ಹೋಗಿದ್ದಾರೆ.ಸರ್ಕಾರ ಮೇಲೊಂದು ಒಳಗೆ ಒಂದು ನಿಲುವಿನಲ್ಲಿದೆ.

ಸಿದ್ದರಾಮಯ್ಯ ಅವರಿಗೆ ಜೀವ ಬೆದರಿಕೆ ವಿಚಾರ.ಸಿದ್ದರಾಮಯ್ಯ ಅವರು ವಿರೋಧ ಪಕ್ಷದ ನಾಯಕರು,ಯಾವುದಕ್ಕೂ ಹೆದರಲ್ಲ.ಸಿದ್ದರಾಮಯ್ಯ ಅವರನ್ನ ಯಾರೂ ಕೂಡಾ ಮುಟ್ಟಲು ಸಾಧ್ಯವಿಲ್ಲ.ಸಿದ್ದರಾಮಯ್ಯ ಅವರನ್ನ ಮುಟ್ಟುವ ಪ್ರಯತ್ನ ಮಾಡಿದ್ರೆ, ರಾಜ್ಯದ ಜನತೆ ತಕ್ಕ ಪಾಠ ಕಲಿಸುತ್ತಾರೆ.ಒಂದು ಮೊಟ್ಟೆ ಮುರುಘಾ ಎಸೆದಿದ್ದಕ್ಕೆ ಇವರಿಗೆ ಪಾಠ ಕಲಿಸಿದ್ದಾರೆ. ಇನ್ನು ಅವರನ್ನ ಮುಟ್ಟುವುದು, ಏನಾದ್ರೂ ಮಾಡುವುದು ಮಾಡಿದ್ರೆ, ರಾಜ್ಯದಲ್ಲಿ ದೊಡ್ಡ ಕ್ರಾಂತಿ ಆಗುತ್ತದೆ ಎಂದು ಹೇಳಿದ ಅವರು
ಮಡಿಕೇರಿ‌ ಚಲೋ ಹಿನ್ನೆಲೆಯಲ್ಲಿ ಮಡಿಕೇರಿ 4 ದಿನ ನಿಷೇದಾಜ್ಞೆ ವಿಚಾರದ ಕುರಿತು KPCC ಅಧ್ಯಕ್ಷರು, ವಿ.ಪಕ್ಷ ನಾಯಕರು ಕುಳಿತು ಚರ್ಚೆ ಮಾಡುತ್ತೇವೆ ಎಂದು ಹೇಳಿದರು.
ಈ ಸಮಯದಲ್ಲಿ ಮಾಜಿ ಸಚಿವ ಹೆಚ್.‌ಆಂಜನೇಯ, ಶಾಸಕ‌ ರಘುಮೂರ್ತಿ ಇದ್ದರು.

Leave a Reply

Your email address will not be published. Required fields are marked *