ಕಾಂಗ್ರೆಸ್ ನ ಚಿತ್ರದುರ್ಗ ವಿಧಾನ ಸಭಾ ಕ್ಷೇತ್ರದ ವೀರೇಂದ್ರ ಪಪ್ಪಿ ಅವರು ಛಾಪಾ ಕಾಗದದ ಮೇಲೆ ಕ್ಷೇತ್ರದ ಜನತೆಗೆ ಆಣೆ ಮತ್ತು ಪ್ರತಿಜ್ಞೆಯನ್ನು ಮಾಡಿದ್ದು ಅದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಅವರ ಪ್ರತಿಜ್ಞೆಯ ಅಂಶಗಳಿಲ್ಲಿ ಪ್ರಮುಖವಾಗಿದ್ದು, ನಾನು ಯಾವುದೇ ಕಾರಣಕ್ಕೂ ಚಿತ್ರದುರ್ಗದ ಜನತೆಗೆ ಕಳಂಕ ತರುವ ಕೆಲಸ ಮಾಡುವುದಿಲ್ಲ, ಭ್ರಷ್ಟಾಚಾರ ಮುಕ್ತ ಕ್ಷೇತ್ರವನ್ನಾಗಿ ಮಾಡುವುದು ನನ್ನ ಸಂಕಲ್ಪ, ಸರ್ಕಾರದ ಎಲ್ಲಾ ಸೌಲಭ್ಯಗಳನ್ನು ಪ್ರಾಮಾಣಿಕವಾಗಿ ಜನರಿಗೆ ತಲುಪಿಸುತ್ತೇನೆ ಜನಸ್ನೇಹಿ ಆಡಳಿತ ನಡೆಸುತ್ತೇನೆ, ನವ ಚಿತ್ರದುರ್ಗ ನಿರ್ಮಾಣದ 24 ಅಂಶಗಳನ್ನು ಹಂತ ಹಂತವಾಗಿ ಈಡೇರಿಸುತ್ತೇನೆ. ರೈತರ ಸಂಕಷ್ಟಗಳಿಗೆ ಸ್ಪಂದಿಸಿ ಕೆರೆಗಳಿಗೆ ಏತ ನೀರಾವರಿ ಯೋಜನೆಗಳನ್ನು ಅನುಷ್ಠಾನಕ್ಕೆ ತರುತ್ತೇನೆ. ಮನೆಗಳಿಗೆ ಹಕ್ಕು ಪತ್ರ, ಬಗರ್ ಹುಕುಂ ಸಾಗುವಳಿದಾರರಿಗೆ ಸಾಗುವಳಿ ಹಕ್ಕು ಪತ್ರ, ನಿವೇಶನ ರಹಿತರಿಗೆ ನಿವೇಶ, ವಸತಿ ರಹಿತರಿಗೆ ವಸತಿ ನೀಡಲು ಬದ್ದನಾಗಿರುತ್ತೇನೆ, ಯುವಕರ ಶಿಕ್ಷಣ ಮತ್ತು ಮಹಿಳೆಯರಿಗೆ ಉದ್ಯೋಗ ನೀಡಲು ನನ್ನದೆ ಆದ ಯೋಜನೆಗಳನ್ನು ಅನುಷ್ಠಾನಕ್ಕೆ ತರುತ್ತೇನೆ. ನಾನು ಶಾಸಕನಾಗಿ ಆಯ್ಕೆ ಆದರೆ ಈ ಎಲ್ಲಾ ಯೋಜನೆಗಳನ್ನು ಜಾರಿಗೆ ತಂದು ಕಂಕಣ ಬದ್ದವಾಗಿ ಸಂವಿಧಾನದ ಆಶಯದಂತೆ ಮೇಲೆ ಮಾಡಿರುವ ಶಪಥದಂತೆ ನಡೆಯುತ್ತೇನೆ ಎಂದುಅವರು ಪ್ರತಿಜ್ಞೆ ಮಾಡಿದ್ದಾರೆ