ಕೋಟೆ ನಾಡಿಗೆ ಯುವ ರಾಜ ರಾಹುಲ್ ಗಾಂಧಿ ಆಗಮನಕ್ಕೆ ಕ್ಷಣ ಗಣನೆ

ರಾಜಕೀಯ

  • BIG BREAKING NEWS:

ಕಾಂಗ್ರೆಸ್ ನ ಯುವ ರಾಜ ರಾಹುಲ್ ಗಾಂಧಿ ಇಂದು ಕೋಟೆ ನಾಡು ಚಿತ್ರದುರ್ಗದ ಆಗಮನಕ್ಕೆ ಕ್ಷಣ ಗಣನೆ ಆರಂಭವಾಗಿದೆ.

 

 

 

 

ಹುಬ್ಬಳ್ಳಿಯಲ್ಲಿ ನಡೆಯಲಿರುವ ಕಾಂಗ್ರೆಸ್ ಚಿಂಥನ ಮಂಥನ ಸಭೆಯಲ್ಲಿ ಭಾಗವಹಿಸುವುದು ದಾವಣಗೆರೆಯ ಸಿದ್ದರಾಮೋತ್ಸವ ಕಾರ್ಯಕ್ರಮಕ್ಕೆ ಪಾಲ್ಗೊಳ್ಳಲು ಈಗಾಗಲೇ ಹುಬ್ಬಳ್ಳಿಗೆ ಆಗಮಿಸಿದ್ದಾರೆ. ಇದೀಗ ಕೋಟೆ ನಾಡಿಗೆ ಬರುವುದಷ್ಟೆ ಬಾಕಿ ಇರುವುದು, ಬೆಳಗಿನ 11.20 ಕ್ಕೆ ಮರುಘಾ ಮಠಕ್ಕೆ ಆಗಮಿಸಲಿರುವ ರಾಹುಲ್ ಗಾಂಧಿ ಮುರುಘಾ ಶರಣರನ್ನು ಭೇಟಿ ಮಾಡಿ‌ ಅವರೊಂದಿಗೆ ಚರ್ಚಿಸಲಿದ್ದಾರೆ. ನಂತರ ಮಾಧ್ಯಮಗಳೊಂದಿಗೆ ಮಾತನಾಡಿ,  11.40 ಕ್ಕೆ   ರಸ್ತೆಯ ಮೂಲಕ‌ ಸಿರಿಗೆರೆ ಮಠಕ್ಕೆ ತೆರಳಿ ಅಲ್ಲಿ ಡಾ. ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿಗಳನ್ನು ಭೇಟಿ ಮಾಡಲಿದ್ದಾರೆ. ನಂತರ ರಾಜ್ಯ ರಾಜಕೀಯ ವಲಯದಲ್ಲಿ ಬಾರೀ ಕುತೂಹಲ ಕೆರಳಿಸಿರುವ ದಾವಣಗೆರೆಯಲ್ಲಿ ನಡೆಯಲಿರುವ ಸಿದ್ದರಾಮೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಕಾಂಗ್ರೆಸ್ ನ‌ ಮೂಲಗಳು ದೃಢಪಡಿಸಿವೆ

Leave a Reply

Your email address will not be published. Required fields are marked *