ಜುಲೈ 30 ರಂದು ಬೆಳಗೆರೆ ಗ್ರಾಮದಲ್ಲಿ ಸಮಸ್ಯೆ ಮುಕ್ತ ಪಂಚಾಯಿತಿ ಕಾರ್ಯಕ್ರಮ

ಜಿಲ್ಲಾ ಸುದ್ದಿ

ಚಳ್ಳಕೆರೆ ತಾಲ್ಲೂಕಿನ ಬೆಳಗೆರೆ ಗ್ರಾಮ ಪಂಚಾಯತಿಯಲ್ಲಿ ಸಮಸ್ಯೆ ಮುಕ್ತ ಗ್ರಾಮಪಂಚಾಯಿ ಕಾರ್ಯ ಕ್ರಮವನ್ನು ಜುಲೈ 30ರಂದು  ಹಮ್ಮಿಕೊಳ್ಳಾಗಿದೆ ಎಂದು ತಹಶೀಲ್ದಾರ್ ರಘುಮೂರ್ತಿ ಹೇಳಿದರು.

 

 

 

ಈ ಕಾರ್ಯಕ್ರಮದ ಪ್ರಯುಕ್ತ ಇಂದು ಗ್ರಾಮಪಂಚಾಯಿತಿಯ ವಾಲ್ಮೀಕಿ ಭವನದಲ್ಲಿ ತಹಶೀಲ್ದಾರ್ ಎನ್.ರಘುಮೂರ್ತಿ ಅಧ್ಯಕ್ಷತೆ ಯಲ್ಲಿ ಸಮಸ್ಯೆ ಮುಕ್ತಗ್ರಾಮ ಪೂರ್ವಭಾವಿ ಸಭೆಯನ್ನು ಹಮ್ಮಿಕೊಳ್ಳಾಗಿತ್ತು. ಸಭೆಯನ್ನು ಉದ್ದೇಶಿಸಿ ಮಾತನಾಡಿದ ತಹಶೀಲ್ದಾರ್ ರಘುಮೂರ್ತಿ ತಾಲ್ಲೂಕಿನಲ್ಲಿ ಈಗಾಗಲೇ ಸುಮಾರು 51 ಗ್ರಾಮಗಳನ್ನು ಸಮಸ್ಯೆ ಮುಕ್ತ ಗ್ರಾಮಗಳನ್ನಾಗಿ ಮಾಡಲಾಗಿದ್ದು. ಶಾಸಕರಾದ ಟಿ.ರಘುಮೂರ್ತಿ ಹಾಗೂ ಜಿಲ್ಲಾಧಿಕಾರಿಗಳ ಮಾರ್ಗದರ್ಶನದಲ್ಲಿ ಹಲವು ಗ್ರಾಮಗಳ ಶೇಕಡ ನೂರರಷ್ಟು ಸರ್ಕಾರಿ ಸೌಲಭ್ಯಗಳನ್ನು ಸಾರ್ವಜನಿಕರ ಮನೆ ಬಾಗಿಲಿಗೆ ತಲುಪಿಸಬೇಕೆನ್ನುವುದು ಸರ್ಕಾರದ ಹಾಗೂ ಚಳ್ಳಕೆರೆ ಕ್ಷೇತ್ರದ ಶಾಸಕರಾದ ಟಿ ರಘು ಮೂರ್ತಿಯವರ ಆಶಯವಾಗಿದೆ. ಈ ಹಿನ್ನೆಲೆಯಲ್ಲಿ ಇದೇ ಶನಿವಾರ ಬೆಳಗೆರೆ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವಂತಹ ಎಲ್ಲಾ ಗ್ರಾಮಗಳನ್ನು ಸಮಸ್ಯೆ ಮುಕ್ತ ಗ್ರಾಮಗಳನ್ನಾಗಿ ತಾಲೂಕು ಆಡಳಿತವು ಮಾಡಲಿದ್ದು ಈ ಪಂಚಾಯಿತಿ ವ್ಯಾಪ್ತಿಯಲ್ಲಿರುವಂತಹ ಎಲ್ಲಾ ಗ್ರಾಮಸ್ಥರುಗಳು ಕಂದಾಯ ಇಲಾಖೆಯಿಂದ ಮತ್ತು ಬೇರೆ ಇಲಾಖೆಗಳಿಂದ ಪರಿಪೂರ್ಣವಾದ ಎಲ್ಲಾ ಸೌಲಭ್ಯಗಳನ್ನು ಪಡೆಯಬೇಕೆಂದು ಈ ಕುರಿತು ಬೆಳಗೆರೆ ಗ್ರಾಮ ಪಂಚಾಯತಿ ಅಧ್ಯಕ್ಷರು ಉಪಾಧ್ಯಕ್ಷರು ಮತ್ತು ಸದಸ್ಯರು ತಮ್ಮ ವ್ಯಾಪ್ತಿಯಲ್ಲಿ ಬರುವಂತಹ ಸಾರ್ವಜನಿಕರ ಸಮಸ್ಯೆಗಳನ್ನು ಕಂದಾಯ ಇಲಾಖೆ ಗಮನಕ್ಕೆ ತಂದು ನೊಂದ ಮತ್ತು ಸೌಲಭ್ಯ ವಂಚಿತ ಎಲ್ಲಾ ವರ್ಗದ ಜನರಿಗೆ ಸರ್ಕಾರದ ಸೌಲಭ್ಯಗಳನ್ನು ಒದಗಿಸಿ ತಮ್ಮ ಸಾರ್ಥಕತೆ ಮೆರೆಯಬೇಕೆಂದು ಮನವಿ ಮಾಡಿದರು.
ಈ ಸಮಯದಲ್ಲಿ ಬೆಳಗೆರೆ ಗ್ರಾಮಪಂಚಾಯಿತಿ ಅಧ್ಯಕ್ಷ ಎಚ್.ಇ.ಮಧು ಮಾತನಾಡಿ ಸಮಸ್ಯೆ ಮುಕ್ತ ಗ್ರಾಮಪಂಚಾಯಿತಿ ಗೆ ಎಲ್ಲಾ ಅನುಕೂಲ ಮೂಡಿಕೊಡಲಾಗುವುದು. ಈ ಗ್ರಾಮಪಂಚಾಯಿತಿ ಗೆ ಒಳಪಟ್ಟಂತೆ ಕಲಮರಹಳ್ಳಿ,ಗೊರ್ಲತ್ತು,ನಾರಾಯಣಪುರ,ಮಜರೆ ಗ್ರಾಮ ರಂಗನಾಥಪುರ,ಹುಲಿಕುಂಟೆ ಗ್ರಾಮ ಸೇರಿದಂತೆ ಕಂದಾಯ ಇಲಾಖೆ ಪೋಡಿ,ದಾರಿ ಸಮಸ್ಯೆ, ಪಿಂಚಣಿ ,ವಿಧವಾ ವೇತನ,ಸೇರಿದಂತೆ ಇತರೆ ಸಮಸ್ಯೆಗಳನ್ನು ಅಧಿಕಾರಿಗಳಿಗೆ ಸಮಸ್ಯೆ ತಿಳಿಸಬಹುದು ಶನಿವಾರ ನಡೆಯಲಿರುವ ಸಮಸ್ಯೆ ಮುಕ್ತ ಕಾರ್ಯಕ್ರಮಕ್ಕೆ ಗ್ರಾಮಪಂಚಾಯಿತಿ ಸಿದ್ದವಾಗಿದೆ ಎಂದರು.
ಪಿಡಿಓ ದೇವದೇಂದ್ರಪ್ಪ
ಮಾತನಾಡಿದರು.ಈ ಸಮಯದಲ್ಲಿ ಗ್ರಾಮಪಂಚಾಯಿತಿ ಸದಸ್ಯರು ಆರ್ ಐ ಮೋಹನ್ ಗ್ರಾಮಲೆಕ್ಕಿಗರಾದ ಕಾಡೇಶ,ಗಿರಿಯಪ್ಪ, ಹಾಗೂ ಕಂದಾಯ ಅಧಿಕಾರಿಗಳು. ಗ್ರಾಮಸ್ಥರು ಗ್ರಾಮ ಪಂಚಾಯತಿ ಸಿಬ್ಬಂದಿ ಇದ್ದರು.

Leave a Reply

Your email address will not be published. Required fields are marked *