ಹೊಳಲ್ಕೆರೆ ಪಟ್ಟಣದ ಮೆಟ್ರಿಕ್ ಪೂರ್ವ ವಸತಿ ನಿಲಯದಲ್ಲಿ ರಾತ್ರಿ ಊಟ ಸೇವಿಸಿ ಅಸ್ವಸ್ಥರಾಗಿದ್ದ ಮಕ್ಕಳು ಚೇತರಿಸಿಕೊಂಡಿದ್ದಾರೆ ಎಂದು ಚಿತ್ರದುರ್ಗ ಜಿಲ್ಲಾ ಬಿಸಿಎಂ ಅಧಿಕಾರಿ ವೆಂಕಟೇಶಯ್ಯ ಹೇಳಿದ್ದಾರೆ. ಅವರು ಸಂಯುಕ್ತವಾಣಿಯೊಂದಿಗೆ ದೂರವಾಣಿಯಲ್ಲಿ ಮಾತನಾಡಿದರು.
ಹೊಳಲ್ಕೆರೆ ಪಟ್ಟಣ ಮೆಟ್ರಿಕ್ ಪೂರ್ವ ವಿದ್ಯಾರ್ಥಿ ನಿಲಯದಲ್ಲಿ ನಿನ್ನೆ ರಾತ್ರಿ ಸಿಹಿಯೂಟ ಹಾಗೂ ಅನ್ನ ಸಾಂಬರ್ ನ್ನು 53 ವಿದ್ಯಾರ್ಥಿಗಳು ಸೇಚಿಸಿದ್ದರು. ನಂತರ ಅವರಲ್ಲಿ 13 ಜನರು ಅಸ್ವಸ್ಥರಾಗಿ ಹೊಳಲ್ಕೆರೆ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆಯನ್ನು ಪಡೆದಿದ್ದರು, ಶೀಘ್ರವಾಗಿ ಗುಣಮುಖರಾದ ಅವರುಗಳನ್ನು ಮತ್ತೆ ವಸತಿ ನಿಲಯಕ್ಕೆ ತಡ ರಾತ್ರಿಯೇ ಕರೆ ತರಲಾಯಿತು,ಇಂದು ಬೆಳಗ್ಗೆ ಅವರೆಲ್ಲರೂ ಕೂಡ ಶಾಲೆಗಳಿಗೆ ತೆರಳಿದ್ದು, ಆರೋಗ್ಯವಾಗಿದ್ದಾರೆ ಪೋಷಕರಲ್ಲಿ ಯಾವುದೇ ಆತಂಕ ಬೇಡ ಎಂದು ತಿಳಿಸಿದ್ದಾರೆ.
ಸುದ್ದಿ ಜಾಹೀರಾತಿಗಾಗಿ ಸಂಪರ್ಕಿಸಿ: 8660924503