ನೇಗಿಲು ತರಲು ಹೋಗಿದ್ದ ರೈತನಿಗೆ ಆಕಸ್ಮಿಕ ವಿದ್ಯುತ್ ತಂತಿ ತಗುಲಿ ಆತ ಸ್ಥಳದಲ್ಲೆ ಮೃತಪಟ್ಟ ಘಟನೆ ಚಿತ್ರದುರ್ಗ ತಾಲೂಕಿನ ಈರಜ್ಜನ ಹಟ್ಟಿಯಲ್ಲಿ ನಡೆದಿದೆ.
ಮೃತನನ್ನು ರಂಗನಾಥ್ ಎಂದು ಗುರುತಿಸಲಾಗಿದ್ದು, ಈತ ಗುರುರಾಜ್ ಎಂಬುವರ ತೋಟಕ್ಕೆ ನೇಗಿಲು ತರಲು ಇಂದು ಬೆಳಗ್ಗೆ ಹೋಗಿದ್ದು, ಆಗ ಈ ದುರಂತ ಸಂಭವಿಸಿದೆ. ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸುದ್ದಿಗಾಗಿ ಸಂಪರ್ಕಿಸಿ : 8660924503