ತುರುವನೂರು ನಾಡ ಕಚೇರಿಗೆ ಆಸನಗಳ ವ್ಯವಸ್ಥೆ ಉದ್ಘಾಟಿಸಿದ ಡಿಸಿ ದಿವ್ಯ ಪ್ರಭು

ಜಿಲ್ಲಾ ಸುದ್ದಿ

ಚಿತ್ರದುರ್ಗ ತಾಲೂಕಿನ ಹೋಬಳಿಯ ನಾಡ‌ಕಚೇರಿಯ ಆವರಣದಲ್ಲಿ‌ ಇಂದು ಸಾರ್ವಜನಿಕರ ಆಸನಗಳನ್ನು ಜಿಲ್ಲಾಧಿಕಾರಿ‌ ದಿವ್ಯ ಪ್ರಭು ಉದ್ಘಾಟಿಸಿದರು.
ದಿನವೂ ನೂರಾರು ಜನರು ತಮ್ಮ ಕೆಲಸ ಕಾರ್ಯಗಳಿಗಾಗಿ ನಾಡ ಕಚೇರಿಗೆ ಆಗಮಿಸುತ್ತಿದ್ದು, ಕುಳಿತುಕೊಳ್ಳಲು ಯಾವುದೇ ಆಸನದ ವ್ಯವಸ್ಥೆ ಇರಲಿಲ್ಲ.ಇದನ್ನು ಮನಗಂಡ ತಹಶೀಲ್ದಾರ್ ಸತ್ಯ ನಾರಾಯಣ್ ಅವರು ವೇದಾಂತ್ ಮೈನಿಂಗ್ ಕಂಪನಿಗೆ ಆಸನಗಳನ್ನು‌ ನಿರ್ಮಿಸಿಕೊಡುವಂತೆ ಮನವಿ ಮಾಡಿದ್ದರು. ಇದಕ್ಕೆ ಪುರಸ್ಕರಿಸಿದ ಮೈನಿಂಗ್ ಕಂಪನಿಯವರು ಆಸನಗಳನ್ನು ನಿರ್ಮಿಸಿಕೊಟ್ಟಿದ್ದಾರೆ. ಇಂದು ಆಸನಗಳ ಉದ್ಘಾಟನೆಯನ್ನು ಜಿಲ್ಲಾಧಿಕಾರಿ‌ ದಿವ್ಯಪ್ರಭು ಉದ್ಘಾಟಿಸಿದರು.ಇವರಿಗೆಚಿತ್ರದುರ್ಗ ತಹಶೀಲ್ದಾರ್ ಸತ್ಯನಾರಾಯಣ್ ಸಾತ್ ನೀಡಿದ್ದರು, ಕಳೆದ ಒಂದು‌ ತಿಂಗಳ ಹಿಂದೆಯೂ ಕೂಡ ಸಾರ್ವಜನಿಕರಿಗಾಗಿ ಕುಡಿಯುವ ನೀರಿನ ವ್ಯವಸ್ಥೆಯನ್ನು ಕೂಡ ಮಾಡಲಾಗಿತ್ತು.‌ಇದರಿಂದ ನಾಡ ಕಚೇರಿಗೆ ಬರುವ ಜನರಿಗೆ ಕುಡಿಯುವ ನೀರಿನ ವ್ಯವಸ್ಥೆ ಹಾಗೂ ಆಸನಗಳ ವ್ಯವಸ್ಥೆಯನ್ನು ಮಾಡಲಾಗಿದ್ದು, ತಹಶೀಲ್ದಾರ್ ಸತ್ಯನಾರಾಯಣ್ ಅವರ ನೇತೃತ್ವದ ಈ‌ ಕಾರ್ಯವನ್ನು ಗ್ರಾಮಸ್ಥರು ಶ್ಲಾಘಿಸಿದ್ದಾರೆ

 

 

 

Leave a Reply

Your email address will not be published. Required fields are marked *