ಶ್ರೀರಾಮುಲುಗೆ ಟಾಂಗ್ ನೀಡಿದ ಬಿ‌ಕೆ ಹರಿಪ್ರಸಾದ್

ರಾಜ್ಯ

ಶ್ರೀರಾಮುಲು ಯಾರ ಜೊತೆ ಇದ್ದರು, ಜೊತೆಗೆ ಇದ್ದವರು ನಾಲ್ಕೈದು ವರ್ಷ ಯಾಕೆ ಜೈಲಿಗೆ ಹೋಗಿದ್ದರು  ಸರ್ಕಾರದ ಅವಧಿ ಮುಗಿದ ಬಳಿಕ ಯಾರು ಜೈಲಿಗೆ ಹೋಗ್ತಾರೆ ನೋಡೋಣ ಎಂದು ಬಿಕೆ ಹರಿ ಪ್ರಸಾದ್ ಸವಾಲು ಹಾಕಿದರು.
ಅವರು ಮೊಳಕಾಲ್ಮೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು. ರಾಹುಲ್ ಗಾಂಧಿ ಪಾದಯಾತ್ರೆ ನಡೆಯುವ ಸ್ಥಳಗಳಲ್ಲಿ ಕಾಂಗ್ರೆಸ್ ಮಟಾಶ್ ಎಂಬ ಶ್ರೀರಾಮುಲು ಹೇಳಿಕೆಗೆ ಪ್ರತಿಕ್ರಿಯಿಸಿದರು. ಎಸ್ಟಿ ಮೀಸಲಾತಿಯನ್ನು ಪಾರ್ಲಿಮೆಂಟ್ ನಲ್ಲಿ‌ ಪಾಸ್ ಮಾಡಿಸುವುದಕ್ಕೆ ಹೇಳಿ, ಚುನಾವಣೆ ವರ್ಷದಲ್ಲಿ‌ ಬಿಹಾರದಲ್ಲಿ ಮೋಹನ್ ಭಾಗವತ್ ಮೀಸಲಾತಿ ರದ್ದು ಮಾಡಿ ಎಂದು ಹೇಳಿದ್ದರು, ಆದ್ದರಿಂದ ಬಿಜೆಪಿ ಸೂತ್ರದಾರ ಮೋಹನ್ ಭಾಗವತ್ ಅವರನ್ನು ಕೇಳೋಕೆ ಹೇಳಿ ಎಂದು ಕುಟುಕಿದರು, ಇನ್ನು ಯಡಿಯೂರಪ್ಪ‌ ಅವರಿಗೆ ಜೈಲಿಗೆ ಹೋಗುವ ಭಯವಿದೆ. ಸಂಪೂರ್ಣ ತನಿಖೆಗೆ ಸುಪ್ರೀಂ ಆದೇಶ ಮಾಡಿದೆ, ಇದರಿಂದ ಇದನ್ನೆಲ್ಲಾ ಹೇಳುವ ಅನಿವಾರ್ಯ ಬಂದಿದೆ.75 ವರ್ಷಗಳ ಬಳಿಕ ಇವರನ್ನು ಮಾರ್ಗದರ್ಶಕ್ ಮಂಡಲಕ್ಕೆ ಕಳುಹಿಸಿದ್ದಾರೆ. ಯಡಿಯೂರಪ್ಪ‌ಅವರಿಗೆ ಬುದ್ದಿ ಭ್ರಮಿಣೆಯಾಗಿದೆ.ಹಾಗಾಗಿ ಹೀಗೆ ಮಾತನಾಡುತ್ತಿದ್ದಾರೆ . ಮೋದಿನೇ 56 ಇಂಚು ಲೀಡರ್ ಒಂದು ಪ್ರಸ್ ಮೀಟ್ ಮಾಡಿಲ್ಲ, ರಾಷ್ಟ್ರೀಯ ಮಾಧ್ಯಮಗಳಿಗಾಗಿ ಪತ್ರಿಕಾ ಗೋಷ್ಠಿ ನಡೆಸಿಲ್ಲ,ಕಾರಣ ಅವರಿಗೆ ಉತ್ತರ ನೀಡಲು ಆಗಲ್ಲ, ಸರ್ಕಾರದ ಅವಧಿ ಮುಗಿಯುವುದರೊಳಗೆ ಯರ್ಯಾರು ಜೈಲಿಗೆ ಹೋಗುತ್ತಾರೋ‌ನೋಡೋಣ ಎಂದರು

 

 

 

Leave a Reply

Your email address will not be published. Required fields are marked *