ಒಂದು ಕ್ಷೇತ್ರದಲ್ಲಿ‌ ನಿಲ್ಲದೆ ಅಲೆಯುತ್ತಿರುವ ಶ್ರೀರಾಮುಲು

ರಾಜ್ಯ

ಕಳೆದ ಮೂರು ಎಲೆಕ್ಷನ್ ನಲ್ಲಿ ಶ್ರೀರಾಮುಲು ಒಂದು ಕಡೆ ನಿಂತಿಲ್ಲ ಈ‌ ಬಾರಿಯೂ ಕ್ಷೇತ್ರ ಬಿಟ್ಟು ಹೋಗುವ ಯತ್ನ ನಡೆಸಿದ್ದಾರೆ ಎಂದು ಮಾಜಿ ಸಚಿವ ಪ್ರಯಾಂಕ್ ಖರ್ಗೆ ವ್ಯಂಗ್ಯವಾಡಿದರು.

 

 

 

ಅವರು ಚಳ್ಳಕೆರೆ ಪಾದಯಾತ್ರೆಯಲ್ಲಿ ಮಾತನಾಡಿದರು. ಕಳೆದ ಬಾರಿ ಬಿಜೆಪಿ ನಾಯಕರು ಎಲ್ಲಿ‌ಗೆದ್ದಿದ್ದಾರೆ, ಎಲ್ಲಿ ಖರೀದಿ ಮಾಡಿದ್ದಾರೆ ಎಂದು ಬಿಜೆಪಿ ನಾಯಕರು ಹೇಳಲಿ, ಅಮಿತ್ ಷಾ, ಮೋದಿ ದೆಹಲಿಯಲ್ಲಿ ಇದ್ದಾರೆ, ದೆಹಲಿ ಗೆಲ್ಲೋಕೆ ಯಾಕೆ ಆಗಿಲ್ಲ, ಎಂದು ವ್ಯಂಗ್ಯ ಮಾಡಿದರು, ಭ್ರಷ್ಟಾಚಾರ, ಆಡಳಿತ ಪೇ ಸಿಎಂ, ಡೈವರ್ಟ್ ಮಾಡಲು ವೈಯುಕ್ತಿಕ ಟೀಕೆ ಮಾಡುತ್ತಿದ್ದಾರೆ, ಅವರ ಆಡಳಿತದ ಮೇಲೆ ಅವರಿಗೆ ನಂಬಿಕೆ ಇದ್ದರೆ ಅವರು ಪಾದಯಾತ್ರೆ ಮಾಡಲಿ ಆಗ ಜನ ಹೂ ಹಾಕುತ್ತಾರೋ ಕಲ್ಲಲ್ಲಿ ಹೊಡಿತಾರೋ ನೋಡೋಣ, ಬಿಜೆಪಿಯವರು ಮಾಡುವುದು ಜನ ಸಂಕಲ್ಪ ಯಾತ್ರೆಯಲ್ಲ ವಿಜಯೇಂದ್ರಗಾಗಿ ನಡೆಯುವ ಯಾತ್ರೆಯಾಗಿದೆ.ಪಿಎಸೈ ಹಗರಣದಲ್ಲಿ ಬಿಜೆಪಿಯವರು ಇದ್ದಾರೆ ಎಂದು ಯತ್ನಾಳ್ ಹೇಳುತ್ತಿದ್ದಾರೆ. ಅವರ ಆಡಳಿತದಲ್ಲಿ ಏನು ನಡೆಯುತ್ತಿದೆ ಎಂದು ಬಿಜೆಪಿ ಹೇಳುತ್ತಿಲ್ಲ, ಆದರೆ ಕನಕ ಗಿರಿ ಶಾಸಕ ಹಾಗೂ ವಿಜಯೇಂದ್ರ ಹೆಸರು ಪಿಎಸ್ ಐ ಹಗರಣದಲ್ಲಿ‌ ಕೇಳಿ ಬರುತ್ತಿದೆ. ಮೊದಲು ಈ ಬಗ್ಗೆ ತನಿಖೆ ಮಾಡಲಿ, ಸಂವಿಧಾನದಲ್ಲಿ ಎಲ್ಲರೂ ಒಂದೇ ಗೂಡ್ಸೆದೇಶ ಪ್ರೇಮಿ ಎಂದು ಹೇಳುತ್ತಾರೆ ಅವರು ಯಾರ ಧೂಳಿಗೆ ಸಮ ಎಂದು ಪ್ರಶ್ನಿಸಿದರು. ನನ್ನ ವಯಸ್ಸು ಯಡಿಯೂರಪ್ಪ‌ ಅವರ ರಾಜಕೀಯ ಅವಧಿ ಒಂದೆ‌ ಇದೆ, ನಾನು ಅವರ ಬಗ್ಗೆ ಹೆಚ್ಚು ಮಾತಾನಾಡಲ್ಲ, ಎಂದರು

Leave a Reply

Your email address will not be published. Required fields are marked *