ಕಾಡುಗೊಲ್ಲರ ಮೀಸಲಾತಿಗೆ ವಿರೋಧವಿಲ್ಲವೆಂದು ಉಲ್ಟಾ ಹೊಡೆದ ಯಾದವ ಶ್ರೀಗಳು..!
ಚಿತ್ರದುರ್ಗ : ಬುಡಕಟ್ಟು ಕಾಡುಗೊಲ್ಲರ ಒಳಮೀಸಲಾತಿಗೆ ಬೆಂಬಲ್ಲ ಇಲ್ಲ ಎಂದು ಚಿತ್ರದುರ್ಗ ಮಠದ ಶ್ರೀ ಕೃಷ್ಣಯಾದವಾನಂದ ಸ್ವಾಮಿಯ ಹೇಳಿಕೆಗೆ ತೀವ್ರ ಆಕ್ಷೇಪ ವ್ಯಕ್ತವಾಗುತ್ತಿದ್ದಂತೆ ಇದೀಗ ಶ್ರೀಗಳು ಉಲ್ಟಾ ಹೊಡೆದಿದ್ದಾರೆ.
ಚಿತ್ರದುರ್ಗ ನಗರದಲ್ಲಿ ಮಾದ್ಯಮ ಹೇಳಿಕೆ ನೀಡಿರುವ ಶ್ರೀಗಳು “ಕೆಲ ಮಾಧ್ಯಮಗಳಲ್ಲಿ ನಮ್ಮ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಿ ಪ್ರಕಟಿಸಲಾಗಿದೆ. “ಕಾಡುಗೊಲ್ಲರ ಒಳಮೀಸಲಾತಿಗೆ ಬೆಂಬಲ ಇಲ್ಲ” ಈ ರೀತಿಯ ಹೇಳಿಕೆಯನ್ನು ನಾವು ನೀಡಿಲ್ಲವೆಂದು ಸ್ಪಷ್ಟಪಡಿಸುತ್ತೇವೆ. ಹಾಗೂ ಕಾಡುಗೊಲ್ಲರ ಮೀಸಲಾತಿಗೆ ನಮ್ಮ ವಿರೋಧ ಇಲ್ಲ ಎಂದು ಮತ್ತೊಮ್ಮೆ ಸ್ಪಷ್ಟಪಡಿಸುತ್ತವೆ ಎಂದು ಉಲ್ಟಾ ಹೊಡೆದಿದ್ದಾರೆ.
ಯಾದವ ಸಮುದಾಯದ ಕಟ್ಟಕಡೆಯ ವ್ಯಕ್ತಿಯ ಅಭಿವೃದ್ಧಿಗಾಗಿ ನಮ್ಮ ಪ್ರಯತ್ನವಿದೆ. ಸಾಮಾಜಿಕವಾಗಿ ಶೈಕ್ಷಣಿಕವಾಗಿ ಆರ್ಥಿಕವಾಗಿ ರಾಜಕೀಯವಾಗಿ ಧಾರ್ಮಿಕವಾಗಿ ಅಭಿವೃದ್ಧಿಯಾಗಲು ಶ್ರೀಮಠ ಕಂಕಣ ತೊಟ್ಟು ಶ್ರಮಿಸುತ್ತಿದೆ. ಸಂವಿಧಾನದ ಆಶಯದಂತೆ ಸರ್ವರಿಗೂ ಸಮಬಾಳು ಸಮಪಾಲು ಸೂತ್ರದಲ್ಲಿ ಇತರೆ ಸಮುದಾಯದೊಂದಿಗೆ ಸರಿಸಮನಾಗಿ ಗೊಲ್ಲ ಸಮುದಾಯ ಸಮಸಮಾಜ ನಿರ್ಮಾಣಕ್ಕೆ ಸದೃಢವಾಗಲು ಶ್ರೀಮಠ ಅಶಿಸುತ್ತದೆ. ಸಮುದಾಯದ ಅಂತರಿಕ ವಿಚಾರವನ್ನು ಸಮಾಜದ ತಜ್ಞರು ಚರ್ಚಿಸಿ ಅಭಿವೃದ್ಧಿ ಪೂರ್ವಕವಾಗಿ ಸರ್ಕಾರದೊಂದಿಗೆ ವ್ಯವಹಾರಿಸುತ್ತಾರೆ.
ಒಗ್ಗಟಿನಲ್ಲಿ ಬಲವಿದೆ ಎಂಬ ನಾಡ್ನುಡಿಯಂತೆ ಎಲ್ಲಾ ಒಳಪಂಗಡಗಳು ಒಂದಾಗಿ ಸಾಗಬೇಕು. ಗೊಲ್ಲ ಸಮೂದಯದ ಬಲವಂತರು ಅಬಲ ಅಶಕ್ತರನ್ನು ಕೈಯಿಡಿದು ಶಕ್ತಿ ತುಂಬುವ ಕಾರ್ಯಮಾಡಬೇಕು. ಶ್ರೀಮಠ ಸಮಸ್ತ ಗೊಲ್ಲ ಸಮುದಾಯದ ಕ್ಷೇಮ ಅಭಿವೃದ್ಧಿ ಬಗ್ಗೆ ಚಿಂತನೆ ನಡೆಸುತ್ತದೆ ಎಂದು ಶ್ರೀಗಳು ಸ್ಪಷ್ಟನೆ ನೀಡಿದ್ದಾರೆ.
ಏನಿದು ಹೇಳಿಕೆ: ಕಾಡುಗೊಲ್ಲರು ಪರಿಶಿಷ್ಟ ಪಂಗಡಕ್ಕೆ ಸೇರಿಸಲು ಸುಮಾರು ವರ್ಷಗಳಿಂದ ಹೋರಾಟ ನಡೆಸುತ್ತಿದ್ದಾರೆ. ಈಗಾಗಲೇ ಕಾಡುಗೊಲ್ಲರ ಬಗ್ಗೆ ಕುಲಶಾಸ್ತ್ರೀಯ ಅಧ್ಯಯನ ನಡೆಸಿ, ಮೀಸಲಾತಿ ನೀಡುವಂತೆ ರಾಜ್ಯ ಸರ್ಕಾರ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಿದೆ.
ಆದರೆ ರಾಮನಗರ ಜಿಲ್ಲೆಯ ಮಾಗಡಿಯಲ್ಲಿ ಶ್ರೀ ಕೃಷ್ಣಯಾದವ ಗೊಲ್ಲರ ಸಂಘ ಏರ್ಪಡಿಸಿದ್ದ ಸಧಾಕರಿಗೆ ಸೇವಾ ಪುರಸ್ಕಾರ ಮತ್ತು ಅಭಿನಂದನಾ ಕಾರ್ಯಕ್ರಮದಲ್ಲಿ ” ಮೀಸಲಾತಿಗಾಗಿ ಸಮಾಜ ಒಡೆಯಬೇಡಿ, ನಮ್ಮ ಮಠವು ಕಾಡುಗೊಲ್ಲ ಸಮುದಾಯದ ನಡೆಸುತ್ತಿರುವ ಒಳಪಂಗಡದ ಮೀಸಲಾತಿ ಹೋರಾಟಕ್ಕೆ ಬೆಂಬಲ ನೀಡುವುದಿಲ್ಲ ಎಂದು ಹೇಳಿಕೆ ನೀಡಿದ್ದಕ್ಕೆ ಆಕ್ರೋಶ ವ್ಯಕ್ತಪಡಿಸಿದರು. ಇದೀಗ ಹೇಳಿಕೆಗೆ ವಿರೋಧ ವ್ಯಕ್ತವಾಗುತ್ತಿದ್ದಂತೆ ಮಾದ್ಯಮ ಹೇಳಿಕೆಯಲ್ಲಿ ಉಲ್ಟಾ ಹೊಡೆದಿದ್ದಾರೆ.
ಸುದ್ದಿ ಜಾಹೀರಾತಿಗಾಗಿ ಸಂಪರ್ಕಿಸಿ : 8660924504