ಕಾಡು ಗೊಲ್ಲರ ಆರಾಧ್ಯ ದೈವ ಶ್ರೀ ಕ್ಯಾತೆ ದೇವರ ಜಾತ್ರೆಗೆ ಸಂಪ್ರದಾಯದ ಪ್ರಕಾರ ಮರ ಕಡಿಯುವದರ ಮೂಲಕ ಚಾಲನೆ ನೀಡಲಾಯಿತು.ಈ ಕಾರ್ಯಕ್ರಮಕ್ಕೆ ಮಂಡಲ ಅಧ್ಯಕ್ಷರಾದ ಸೂರನಹಳ್ಳಿ ಶ್ರೀನಿವಾಸ್ ರವರು ಭಾಗವಹಿಸಿ ಕ್ಯಾತೆದೇವರಿಗೆ ಭಕ್ತಿಯಿಂದ ನಮಿಸಿ ಸಾಮೂಹಿಕ ಭಜನೆ ಮಾಡಿ ಕಾಡು ಗೊಲ್ಲರು ಪ್ರೀತಿಯಿಂದ ಬರಮಾಡಿಕೊಂಡರು. ಈ ಸಂದರ್ಭದಲ್ಲಿ ಮಾನ್ಯ ತಶೀಲ್ದಾರ್ ಎನ್. ರಘುಮೂರ್ತಿ, ಜಯಪಾಲಯ್ಯ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರಾದ ರಂಗಸ್ವಾಮಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಚಿಕ್ಕಣ್ಣ ಹಾಗೂ ರಮೇಶ್ ಹಾಜರಿದ್ದರು.