ಪತ್ರಕರ್ತರಿಗೆ ಉಚಿತ ನಿವೇಶನ ನೀಡುವ ಬಗ್ಗೆ ಗ್ರಾಮಪಂಚಾಯಿತಿವ್ಯಾಪ್ತಿಯಲ್ಲಿ ಜಾಗ ನೋಡ ಬಹುದು ಪಿಡಿಓ ಗೆ ಹೇಳಿ ನಾನು ಕೂಡ ಸಭೆಯಲ್ಲಿ ಇಟ್ಟು ಮಂಜೂರು ಮಾಡಿಸುವ ಪ್ರಯತ್ನ ಮಾಡುತ್ತೇನೆ ಎಂದು ಹಿರಿಯೂರು ಶಾಸಕಿ ಪೂರ್ಣಿಮಾ ಶ್ರೀನಿವಾಸ್ ಹೇಳಿದರು.
ಅವರು ಹಿರಿಯೂರಿನ ವಾಣಿ ಕಾಲೇಜಿನಲ್ಲಿ ನಡೆದ. ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದಿಂದ ಪತ್ರಿಕಾ ದಿನಾಚರಣೆ ಹಾಗೂ ನೂತನ ಪದಾಧಿಕಾರಿಗಳ ಅಧಖಾರ ಸ್ವೀಕಾರ ಕಾರ್ಯಕ್ರಮದಲ್ಲಿ ಮಾತನಾಡಿದರು.
ಸಂಘದ ಚಟುವಟಿಕೆಗಳನ್ನು ನಡೆಸಲು ತಾತ್ಕಾಲಿಕವಾಗಿ ನಗರಸಭೆ ವ್ಯಾಪ್ತಿಯಲ್ಲಿ ಕೊಠಡಿ ಕೊಡಿಸುವುದಾಗಿ ಹೇಳಿದರು. ಇನ್ನು ಶಾಸಕಿಯಾಗಿ ನನ್ನ ಇತಿಮಿತಿಯಲ್ಲಿ ಏನೇನು ಮಾಡಬೇಕೋ ಅದನ್ನು ಮಾಡಿಕೊಡುತ್ತೇನೆ. ಆದರೆ ಬಸ್ ಪಾಸ್ ಮಾತ್ರ ಸರ್ಕಾರದ ಜೊತೆಗೆ ಮಾತಾಡಬೇಕು.ನಾನು ಈ ಬಾರಿಯ. ಅಧಿವೇಶನದಲ್ಲಿ ಚರ್ಚೆ ಮಾಡುತ್ತೇನೆ. ಸಿಎಂ ಬಳಿಯೂ ಮಾತನಾಡಿ ಮಾಡಿ ಕೊಡುವಂತೆಯೂ ಮನವಿ ಮಾಡುತ್ತೇನೆ. ಇಂದು ಮಾಡಿದ ವಿಷಯಗಳನ್ನು ಓದಿಕೊಂಡು ಕಲಿಯಿರಿ ದಿನವೂ ಪತ್ರಿಕೆಯನ್ನು ಓದಬೇಕು, ಮುಂದಿನ ದಿನಗಳಲ್ಲಿ ಯಾರೂ ಯಾವ ಸ್ಥಾನಕ್ಕೆ ಬರುತ್ತಾರೆ.ಅವರ ಶಕ್ತಿಯೇನು ಎಂದು ತಿಳಿದಿರುವುದಿಲ್ಲ. ದೇಶದ ಬುಡಕಟ್ಟು ಮಹಿಳೆ ದ್ರೌಪದಿ ಮುರ್ಮು ಅವರು ಇಂದು ದೇಶದ ಅತ್ಯುನ್ನತ ಸ್ಥಾನವನ್ನು ಅಲಂಕರಿಸಿದ್ದಾರೆ.ಯಾರ ಪ್ರತಿಭೆ ಎಲ್ಲಿರುತ್ತದೆಯೋ ತಿಳಿಯುವುದಿಲ್ಲ, ನಿಮ್ಮ ಶಕ್ತಿಯನ್ನು ನೀವೆ ಅರ್ಥ ಮಾಡಿಕೊಂಡು ಮುನ್ನಡೆಯಬೇಕು ಎಂದರು