ಮಾನವೀಯತೆ ಮೆರೆದ ಜಿಲ್ಲಾಧಿಕಾರಿ ಕವಿತಾ ಎಸ್ ಮನ್ನೀಕೇರಿ

ಜಿಲ್ಲಾ ಸುದ್ದಿ

ಚಿತ್ರದುರ್ಗ:  ಹಿರಿಯೂರಿನ ಉಡುವಳ್ಳಿ ಬಳಿ ಲಾರಿ ಪಲ್ಟಿಯಾಗಿ ಅದರಲ್ಲಿ  ಸಿಲುಕಿಹಾಕಿಕೊಂಡಿದ್ದ ವ್ಯಕ್ತಿಯನ್ನು ಕಾಪಾಡಿ ಅಧಿಕಾರಿಗಳ ‌ಸಹಾಯದಿಂದ ಆಸ್ಪತ್ರೆಗೆ ಕಳಿಸುವ ಮೂಲಕ ಮಾನವಿಯತೆಯನ್ನು ಕೋಟೆ ನಾಡಿನ ಜಿಲ್ಲಾಧಿಕಾರಿ ಮೆರೆದಿದ್ದಾರೆ.Chitradurga DC humanity

 

 

 

ಕೋ ಟೆ ನಾಡು ಚಿತ್ರದುರ್ಗ ಜಿಲ್ಲೆಯ ಹಿರಿಯೂರಿನ ಹುಳಿಯಾರ್ ಕ್ರಾಸ್ ಬಳಿ ಹುಳಿಯಾರ್ ಕಡೆಯಿಂದ ಬರುತ್ತಿದ್ದ ಲಾರಿ ನಿಯಂತ್ರಣ ತಪ್ಪಿ ಪಲ್ಟಿ ಹೊಡೆದಿದೆ. ಅದೃಷ್ಟವಶಾತ್ ಅದರಲ್ಲಿದ್ದ ನಾಲ್ಕು ಜನರ ಪ್ರಾಣಕ್ಕೆ ಯಾವ ತೊಂದರೆಯಾಗಿಲ್ಲ. ಆದರೆ ಅವರೆಲ್ಲರಿಗೂ ಗಾಯಗಳಾಗಿವೆ. ಲಾರಿ ಚಾಲಕ ಹಾಗು ಕ್ಲೀನರ್ ಹೆದರಿ ಓಡೋಗಿದ್ದ, ಅದೇ ರಸ್ತೆ ಮಾರ್ಗವಾಗಿ ಪ್ರಯಾಣಿಸಿತ್ತಿದ್ದ ಕೋಟೆ ನಾಡಿನ ಜಿಲ್ಲಾಧಿಕಾರಿ ಕವಿತಾ ಎಸ್ ಮನ್ನಿಕೇರಿ ಲಾರಿ ಒಳಗೆ ಸಿಕ್ಕಾಕಿಕೊಂಡಿದ್ದ ಸುಮಾರು 50 ವರ್ಷದ ವ್ಯಕ್ತಿಯನ್ನು ಸಹ ಅಧಿಕಾರಿಗಳ ಸಹಾಯದಿಂದ ಹೊರಗೆ ತೆಗೆಸಿ ಅಂಬ್ಯುಲೆನ್ಸ್ ಕರೆಸಿ ಕೂಡಲೇ ಹಿರಿಯೂರಿನ ಸರ್ಕಾರಿ ಆಸ್ಪತ್ರೆಗೆ ಸ್ಥಳಾಂತರಿಸಿ ಸೂಕ್ತ ಚಿಕಿತ್ಸೆ ಸಿಗುವಂತೆ ನೋಡಿಕೊಂಡಿದ್ದಾರೆ. ಜಿಲ್ಲಾಧಿಕಾರಿ ಹಾಗೂ ಸಹ ಅಧಿಕಾರಿಗಳ ನ್ನು ನೋಡಿ ಓಡೋಡಿ ಹೋಗುತ್ತಿದ್ದ ಲಾರಿ ಚಾಲಕ ಹಾಗೂ ಕ್ಲೀನರ್ ನನ್ನು ಕೂಗಿ ಕರೆದರೂ ಅವರು ಬರಲಿಲ್ಲ. ಅಣ್ಣನನ್ನು ನೋಡಲು ಲಾರಿಯಲ್ಲಿ ಪ್ರಯಾಣಸಿ ಲಾರಿಯಲ್ಲಿ ಸಿಕ್ಕಿಹಾಕಿಕೊಂಡಿದ್ದ ವ್ಯಕ್ತಿ ಹಾಗೂ ಜೊತೆಯಲ್ಲಿದ್ದ ಯುವಕನನ್ನು ಕೂಡಲೇ ಆಸ್ಪತ್ರೆಗೆ ಸೇರಿಸಿ ಮಾನವೀಯತೆಯನ್ನು ಜಿಲ್ಲಾಧಿಕಾರಿ ಕವಿತಾ ಎಸ್ ಮನ್ನಿಕೇರಿ ಮೆರೆದಿದ್ದಾರೆ.

ಸಂಯುಕ್ತವಾಣಿ

Leave a Reply

Your email address will not be published. Required fields are marked *