ಅಧಿಕಾರಿಗಳು ನೌಕರರು ಸಮಾಜದ ಕಣ್ಣೊರೆಸುವ ಕೆಲಸ ಮಾಡಿ

ಜಿಲ್ಲಾ ಸುದ್ದಿ

ಸಮಾಜದಲ್ಲಿ ಅಧಿಕಾರಿಗಳು ಮತ್ತು ನೌಕರರು ಶೋಷಿತರ ಕಣ್ಣೊರೆಸುವ ಕೆಲಸ ಮಾಡಿದರೆ ಅದು ನಮಗೆ ಸಂವಿಧಾನವನ್ನು ಕೊಟ್ಟಂತ ಡಾಕ್ಟರ್ ಬಿಆರ್ ಅಂಬೇಡ್ಕರ್ ಅವರಿಗೆ ಕೊಟ್ಟಂತಹ ಕಾಣಿಕೆಯಾಗುತ್ತದೆ ಎಂದು ಚಳ್ಳಕೆರೆ ತಹಶೀಲ್ದಾರ್ ಎನ್ ರಘುಮೂರ್ತಿ ಪಾಲ್ಗೊಂಡು ಹೇಳಿದರು.
ಚಳ್ಳಕೆರೆ ತಾಲ್ಲೂಕಿನ ನನ್ನಿವಾಳ ಗ್ರಾಮದ ಎಸ್ಸಿ ಕಾಲೋನಿ ಲಕ್ಷ್ಮಿ ಕೊಲ್ಲಾಪುರದಮ್ಮ ದೇವಿ ದೇವಸ್ಥಾನದ ಮುಂಭಾಗದಲ್ಲಿ ನನ್ನಿವಾಳ ಗ್ರಾಮಪಂಚಾಯಿತಿ ಪೋಲೀಸ್ ಇಲಾಖೆ, ಕಂದಾಯ ಇಲಾಖೆ ವತಿಯಿಂದ ಹಮ್ಮಿಕೊಂಡಿದ್ದ ದಲಿತ ಕುಂದು ಕೊರೆತೆ ಹಾಗೂ ದಲಿತ ಪರಿವರ್ತನೆ ದಿನ ಕಾರ್ಯಕ್ರಮದಲ್ಲಿ ಮಾತನಾಡಿದರು.

 

 

 

ಅಂಬೇಡ್ಕರ್ ಅವರು ತಮ್ಮ ಜೀವಿತ ಅವಧಿಯಲ್ಲಿ ಸಮಾಜದಲ್ಲಿನ ಬಡವರ ಶೋಷಿತರ ಏಳಿಗೆಯನ್ನು ಗಮನದಲ್ಲಿಟ್ಟುಕೊಂಡು ತಮಗೆ ಎಷ್ಟೇ ಅವಮಾನ ಎದುರಿಸಿದರು ಕೂಡ ಇದನ್ನು ಸಮರ್ಥವಾಗಿ ಎದುರಿಸಿ ಭಗವದ್ಗೀತೆ ಅಂತಹ ಸಂವಿಧಾನವನ್ನು ರಾಷ್ಟ್ರಕ್ಕೆ ಅರ್ಪಿಸಿದರು ಸಂವಿಧಾನದ ಫಲವನ್ನು ಉಂಟಂತಹ ಫಲಾನುಭವಿಗಳು ಸ್ವಾರ್ಥಿಗಳಾಗಬಾರದು ಎಂದು ಎಚ್ಚರಿಕೆಯನ್ನು ಕೂಡ ನೀಡಿದ್ದರು ಆದರೆ ಇಂದಿನ ನಮ್ಮ ಸಮೂಹ ಇವರು ಗಮನಿಸಿದಂತಹ ಎಚ್ಚರಿಕೆಯನ್ನು ಪರಿಪಾಲಿಸಿ ಸಮಾಜದ ಬಡವರ ದಿನ ದಲಿತರ ಶ್ರೇಯಸ್ಸನ್ನು ಗಮನದಲ್ಲಿಟ್ಟುಕೊಂಡು ಸರ್ಕಾರದಿಂದ ಕೊಡ ಮಾಡುವಂತಹ ಎಲ್ಲಾ ಸೌಲಭ್ಯಗಳನ್ನು ಸಾರ್ವಜನಿಕರಿಗೆ ಪಾರದರ್ಶಕವಾಗಿ ನೀಡಬೇಕಾದ ಅನಿವಾರ್ಯತೆ ಇದೆ ಎಂದು ಹೇಳಿದರು

Leave a Reply

Your email address will not be published. Required fields are marked *