ಸಿಎಂ ಬಂದೋ ಬಸ್ತ್ ವಾಹನ ಬೈಕ್ ಗೆ ಡಿಕ್ಕಿ ಹೊಡೆದು ನಾಲ್ಕು ಪಲ್ಟಿ ಹೊಡೆದ ಪರಿಣಾಮ ಪೋಲಿಸ್ ಅಧಿಕಾರಿ ಸೇರಿದಂತೆ ಆರು ಜನರು ತೀವ್ರವಾಗಿ ಗಾಯಗೊಂಡಿರುವ ಘಟನೆ ಹಿರಿಯೂರಿನಲ್ಲಿ ನಡೆದಿದೆ.
ಮಾರಿಕಣಿವೆಯ ವೇದಾವತಿ ಜಲಾಶಯಕ್ಕೆ ಸಿಎಂ ಬಾಗೀನ ಸಮರ್ಪಣೆ ಮಾಡಿ ವೇದಿಕೆ ಕಾರ್ಯಕ್ರಮಕ್ಕೆ ಹೋಗುತ್ತಿರುವಾಗ ತಾಲೂಕು ಕಚೇರಿ ಬಳಿ ಬಂದೋಬಸ್ತ್ ಪಡೆ ಜೀಪಿಗೆ ಬೈಕ್ ಅಡ್ಡ ಬಂದಿದ್ದು, ಬೈಕ್ ಗೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಹೋಗಿ ಚಾಲಕನ ನಿಯಂತ್ರಣ ತಪ್ಪಿ ರಸ್ತೆಯಲ್ಲಿ ಬರುತ್ತಿದ್ದ ಮಹಿಳೆ ಮತ್ತು ಮಗುವಿಗೆ ಜೀಪು ಡಿಕ್ಕಿ ಹೊಡೆದು ಜೀಪು ನಾಲ್ಕು ಪಲ್ಟಿಯಾಗಿದೆ. ಇದರಿಂದ ತಾಯಿ ಮಂಜುಳ,ಮಗು ಮನೋಜ್ ಕೂಡ ತೀವ್ರವಾಗಿ ಗಾಯಗೊಂಡಿದ್ದಾರೆ. ಜೀಪಿನಲ್ಲಿದ್ದ ಪೊಲೀಸ್ ಅಧಿಕಾರಿಗಳಾದ ರಮಾಕಾಂತ್, ಪಿಎಸ್ಐ ಅನುಸೂಯಮ್ಮ, ಹಾಗೂ ನಾಲ್ಕು ಮಂದಿ ಪೊಲೀಸರಿಗೆ ಗಾಯವಾಗಿದೆ. ಒಟ್ಟು ಆರು ಜನ ಗಾಯಾಳುಗಳನ್ನು ತಾಲೂಕು ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಿದ್ದು, ಎಸ್ಪಿ ಪರುಶುರಾಮ್ ಭೇಟಿ ನೀಡಿ ಪರಿಶೀಲಿಸಿದ್ದಾರೆ