ಎರಡು ಗುಂಪುಗಳ ನಡುವೆ ಮಾರಾಮಾರಿ ಘರ್ಷಣೆ ನಡೆದು ಎಂಟು ಜನರಿಗೆ ಚಾಕು ಇರಿತವಾಗಿರುವ ಘಟನೆ ಹಾವೇರಿ ಜಿಲ್ಲೆಯ ಶಿಗ್ಗಾವಿ ತಾಲೂಕಿನ ತಡಸಾ ತಾಂಡದಲ್ಲಿ ನಡೆದಿದೆ.
ಘರ್ಷಣೆಯಲ್ಲಿ ರವಿ ಲಮಾಣಿ, ಶಂಕರ ಲಮಾಣಿ,ರಾಜು ಲಮಾಣಿ,ಮಹೇಶ್ ಲಮಾಣಿ, ಲಾಲಪ್ಪ ಲಮಾಣಿ,ಹನುಮಂತ ಪೂಜಾರಿ, ಅಕ್ಷಯ್ ಲಮಾಣಿ ಎಂಬುವವರಿಗೆ ಚೂರಿಯಿಂದ ಇರಿಯಲಾಗಿದೆ.ಇವರ ಸ್ಥಿತಿ ಗಂಭೀರವಾಗಿದ್ದು, ಇವರನ್ನು ಹೆಚ್ಚಿನ ಚಿಕಿತ್ಸೆಗೆ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ರವಿ ಹನುಮಂತ ಸೇರಿದಂತೆ ಎಂಟು ಜನರ ಮೇಲೆ ಹಲ್ಲೆಯ ಆರೋಪ ಕೇಳಿ ಬಂದಿದೆ, ಗ್ರಾಮದ ಬಸ್ ನಿಲ್ದಾಣದ ಜಾಗದ ವಿಚಾದವಾಗಿ ಘರ್ಷಣೆ ನಡೆದಿದೆ ಎನ್ನಲಾಗಿದೆ.