ಭಾವೈಕ್ಯತಾ ಕ್ಷೇತ್ರವಾದ ನಾಯಕನಹಟ್ಟಿ ತಿಪ್ಪೇರುದ್ರಸ್ವಾಮಿ ರಥೋತ್ಸವ ಶುಕ್ರವಾರ ನಡೆಯಲಿದ್ದು, ಚಳ್ಳಕೆರೆ ತಾಲ್ಲೂಕು ಸೇರಿದಂತೆ ಇಡೀ ಜಿಲ್ಲೆಯಲ್ಲಿ ಮಳೆ ಬೆಳೆ ಹಾಗೂ ಜನತೆಗೆ ಹೆಚ್ಚಿನ ಆರೋಗ್ಯ ವನ್ನು ಕರುಣಿಸುವುದಕ್ಕಾಗಿ ಸಿಟಿರವಿ ಅಭಿಮಾನಿ ಬಳಗದಿಂದ ಶುಕ್ರವಾರ ಮುಂಜಾನೆ 5 ಗಂಟೆಗೆ ಚಳ್ಳಕೆರೆ ನಗರದ ನೆಹರೂ ವೃತ್ತದಿಂದ ನಾಯಕನಹಟ್ಟಿ ದೇವಸ್ಥಾನದ ವರೆಗೆ ಬೃಹತ್ ಪಾದಯಾತ್ರೆ ಯನ್ನು ಹಮ್ಮಿಕೊಳ್ಳ ಲಾಗಿದೆ. ಈ ಬೃಹತ್ ಪಾದಯಾತ್ರೆಯಲ್ಲಿ ಸ್ವಯಂ ಪ್ರೇರಣೆಯಿಂದ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಶ್ರೀ ಸ್ವಾಮಿಯ ಕೃಪೆಗೆ ಪಾತ್ರರಾಗಿ ಎಂದು ಈ ಮೂಲಕ ಕೋರಿದ್ದಾರೆ.