ದಾವೂದ್ ಇಬ್ರಾಹಿಂಗೆ ಹಫ್ತಾ ನೀಡಿದಂತೆ ಬಾಂಡ್ ಮೂಲಕ ಬಜೆಪಿಗೆ ಖಾಸಗಿ ಕಂಪನಿಗಳು ಹಫ್ತಾ ನೀಡುತ್ತಿವೆ

ರಾಜ್ಯ

ಬಾಂಡ್ ಖರೀದಿ ಇದೊಂದು ಹಫ್ತಾ ಇದ್ದಂತೆ ಇಂತಹ ಕೆಲಸವನ್ನು ಯಾವ ಪಕ್ಷಗಳು ಮಾಡಿರಲಿಲ್ಲ. ದಾವೂದ್ ಇಬ್ರಾಹಿಂಗೆ ಹಫ್ತಾ ನೀಡಿದಂತೆ ಬಾಂಡ್ ಮೂಲಕ ಬಜೆಪಿಗೆ ಖಾಸಗಿ ಕಂಪನಿಗಳು ಹಫ್ತಾ ನೀಡುತ್ತಿವೆ ಎಂದು ಆಮ್ ಆದ್ಮಿ ಪಕ್ಷ ಜಿಲ್ಲಾಧ್ಯಕ್ಷ ಬಿ‌ ಇ ಜಗದೀಶ್ ಆರೋಪಿಸಿದರು. ಅವರು ಚಿತ್ರದುರ್ಗದಲ್ಲಿ ಪತ್ರಿಕಾ ಗೋಷ್ಠಿಯಲ್ಲಿ ಮಾತಾಡಿದರು.ಬಿಜೆಪಿ ಬಾಂಡ್ ಖರೀದಿ ಯಲ್ಲಿ ಕಂಪನಿಗಳು ಕಪ್ಪು ಹಣ ವೈಟ್ ಮನಿ ಮಾಡಿಕೊಳ್ಳಲು ಸರ್ಕಾರ ಅನುವು ಮಾಡಿಕೊಟ್ಟಿದೆ. ಇಂತಹ ಕಪ್ಪು‌ ಹಣವನ್ನು ವೈಟ್ ಮಾಡಿ ಬಿಜೆಪಿ ಚುನಾವಣೆಗೆ ಹಣ ಕೊಡುತ್ತಿವೆ.ದೇಶದಲ್ಲಿ ಕೇಂದ್ರ ಸರ್ಕಾರ ಭ್ರಷ್ಟಾಚಾರ ತೊಡಗಿದ್ದು ಈ ಪಕ್ಷ ದೇಶಕ್ಕೆ ಮಾರಕವಾಗಿದೆ.ಪಕ್ಷದ ಸಂಸ್ಥಾಪಕ ಹಾಗೂ ದೆಹಲಿ ಸಿಎಂ ಕೇಜ್ರುವಾಲ್ ರನ್ನು ಇ ಡಿ ಬಂಧಿಸಿರುವುದು ಕರಾಳವಾಗಿದೆ.
ಬಿಜೆಪಿ ವಿರೋಧ ಪಕ್ಷಗಳ ನಿರ್ನಾಮಕ್ಕೆ ಮುಂದಾಗಿದೆ.ಬಿಜೆಪಿ ಹಿಂದುಳಿದವರನ್ನು ಮತಕ್ಕಾಗಿ ಬಳಿಸಿಕೊಳ್ಳುತ್ತಿದ್ದಾರೆ. ರಾಮನ ಹೆಸರೇಳುವ ಬಿಜೆಪಿ ರಾಮನ ರೀತಿ‌ ಆಡಳಿತ ನೀಡುವಲ್ಲಿ ವಿಫಲರಾಗಿದ್ದಾರೆ. ಕೇಜ್ರಿವಾಲ್ ಅವರ ಒಳ್ಳೆ ಕೆಲಸಗಳನ್ನು ಸಹಿಸದ ಬಿಜೆಪಿ ಸ್ವಾಯತ್ತ ಸಂಸ್ಥೆ ಇಡಿಯನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ. ಬಿಜೆಪಿಗೆ ವಿರೋಧ ಪಕ್ಷವಿಲ್ಲದಂತೆ ಮಾಡಲು ಹುನ್ನಾರ ಮಾಡುತ್ತಿದೆ. ತಮ್ಮ ಪಕ್ಷದಲ್ಲಿಯೇ ಭ್ರಷ್ಟಾಚಾರ ಮಾಡಿದವರನ್ನು ಬಿಟ್ಟು ಕೇಜ್ರಿವಾಲ್ ಅವರನ್ನು ಇಡಿಯಿಂದ ಬಂಧಿಸಿದ್ದಾರೆ. ಸಂವಿಧಾನವನ್ನು ತಿರುಚಲು ಹೊಂಚು‌ ಹಾಕುತ್ತಿರುವ ಕೇಂದ್ರ ಸರ್ಕಾರದ ವಿರುದ್ಧ ನಮ್ಮ ಹೋರಾಟ ನಿರಂತರವಾಗಿರುತ್ತದೆ. ರಾಜ್ಯದ ಬಿಜೆಪಿ ವಿರುದ್ಧ ಲೋಕಸಭಾ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಬೇಕಿದೆ. ಕೇಜ್ರಿವಾಲ್ ಅವರನ್ನು‌ ಬಿಡುಗಡೆ ಮಾಡುವಂತೆ ಪ್ರತಿಭಟನೆ ನಡೆಸಲಾಗುತ್ತದೆ. ಲೋಕಸಭಾ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷ ಇಂಡಿಯಾ ಒಕ್ಕೂಟದ ಜೊತೆಗೆ ಇದ್ದೇವೆ ಕಾಂಗ್ರೆಸ್ ಗೆ ಬೆಂಬಲಿಸುತ್ತೇವೆ ಎಂದರು.

 

 

 

Leave a Reply

Your email address will not be published. Required fields are marked *