ಸಿದ್ದರಾಮಯ್ಯರ ಬಜೆಟ್ ಅಭಿವೃದ್ದಿ ಪೂರಕವಾಗಿದೆ: ಪ್ರಕಾಶ್ ರಾಮಾನಾಯ್ಕ್

ಜಿಲ್ಲಾ ಸುದ್ದಿ

ಗ್ಯಾರಂಟಿ ಯೋಜನೆಗಳ ಅನುಷ್ಠಾನಗೊಳಿಸಿಯುೂ ರಾಜ್ಯಕ್ಕೆ ಅತ್ಯತ್ಭುತ ಬಜೆಟ್  ಆಗಿದೆ

 

 

 

ಸರ್ವ ಜನಾಂಗ , ಸರ್ವ ಧರ್ಮ, ಆರೋಗ್ಯ , ಶಿಕ್ಷಣ , ವಸತಿ ಮತ್ತು ಶೋಷಿತರ ಅಭಿವೃಧ್ದಿಗೆ ಹಲವಾರು ಮಹತ್ತರ ಯೋಜನೆಗಳು ಅದಕ್ಕೆ ಬೇಕಾಗುವ ಅಗತ್ಯ ಅನುದಾನವನ್ನು ಒದಗಿಸಲಾಗಿದೆ. ಎಸ್ಸಿಪಿ / ಟಿಎಸ್ಪಿ ಸಮರ್ಪಕವಾದ ಮರು ಜಾರಿಗೆ ರೂ 39,121 ಕೋಟಿ . ಅಂಗನವಾಡಿಯಿಂದ ಉನ್ನತ ಶಿಕ್ಷಣಕ್ಕೆ ಹೆಚ್ಚಿನ ಮಹತ್ವ ಮತ್ತು ಹೆಚ್ಚು ಅನುದಾನ, ಸರ್ಕಾರಿ ಕೆಲಸ ಪಡೆಯುವಲ್ಲಿ 2% ಕ್ರೀಡಾ ಮೀಸಲಾತಿ, ನೀಟ್,ಜೆಇಇ,ಐಐಟಿ, ಸಿಇಟಿ 20,000 ಆಕಾಂಕ್ಷಿ ವಿದ್ಯಾರ್ಥಿಗಳಿಗೆ ಉಚಿತ ತರಬೇತಿ ನೀಡಲು ರೂ 10ಕೋಟಿ ನೀಡಿರುವುದು ಬಡ ವಿದ್ಯಾರ್ಥಿಗಳಿಗೆ ನಿಜವಾದ ಆಶಾಕಿರಣವಾಗಿದೆ. ನಮ್ಮ ಚಿತ್ರದುರ್ಗಕ್ಕೆ ವೈದ್ಯಕೀಯ ಮಹಾವಿದ್ಯಾಲಯದ ಕಟ್ಟಡ, ವಸತಿ ನಿಲಯ ಮತ್ತು ಅತಿಥಿಗೃಹಗಳ ನಿರ್ಮಾಣಕ್ಕೆ ರೂ 500 ಕೋಟಿಯ ಗ್ಯಾರಂಟಿಯ ಭಾಗ್ಯವು ನಮ್ಮ ಚಿತ್ರದುರ್ಗದ ಜನರ ಹಲವು ವರ್ಷಗಳ ಹೋಟಾಕ್ಕೆ ಸಿಕ್ಕ ಜಯವಾಗಿದೆ. ಒಟ್ಟಾರೆ ನೂತನ ಸರ್ಕಾರದ 5ಗ್ಯಾರಂಟಿಗಳ ಜೊತೆ ರಾಜ್ಯ ಬಜೆಟ್  ಗ್ಯಾರಂಟಿಯಾಗಿ ಸಮರ್ಪಕವಾಗಿ ಜಾರಿಯಾಗುವುದಲ್ಲಿ ಯಾವುದೇ ಅನುಮಾನವಿಲ್ಲ  ಎಂದು ಕಾಂಗ್ರೆಸ್ ಐಟಿ ಸೆಲ್ ನ ಜಿಲ್ಲಾಧ್ಯಕ್ಷ  ಪ್ರಕಾಶ್ ರಾಮಾನಾಯ್ಕ್  ಅಭಿಪ್ರಾಯ ಪಟ್ಟಿದ್ದಾರೆ.

Leave a Reply

Your email address will not be published. Required fields are marked *