ಚಿತ್ರದುರ್ಗ,: ಯಾವುದೇ ವ್ಯಕ್ತಿ ತಪ್ಪು ಮಾಡಿದ್ದರೆ ಅಂತವರ ಮೇಲೆ ಶಿಸ್ತುಕ್ರಮ ಜರುಗಿಸಿ ಅವರ ಜೊತೆ ೯ ಜನರ ರಾಜೀನಾಮೆ ಪಡೆಯಲಾಗಿದೆ ಎಂದು ಮುರುಘಾ ಮಠದ ಪೀಠಾಧ್ಯಕ್ಷ ಡಾ. ಶಿವಮೂರ್ತಿ ಮುರುಘಾ ಶರಣರು ಹೇಳಿದರು.
ಚಿತ್ರದುರ್ಗದ ಮುರುಘಾ ಮಠದಲ್ಲಿ ಪತ್ರಿಕಾ ಗೋಷ್ಠಿಯನ್ನುದ್ದೇಶಿಸಿ ಮಾತನಾಡುತ್ತಾ, ಕಳೆದ ನಾಲ್ಕು ತಿಂಗಳ ಹಿಂದೆ ನಡೆದ ತಪ್ಪಿಗೆ ಮಠದ ಗೌರವವನ್ನು ಕಾಪಾಡುವ ನಿಟ್ಟಿನಲ್ಲಿ ಅವರೇ ಗಮನಿಸಿ ಸ್ವ ಇಚ್ಛೆಯಿಂದ ರಾಜೀನಾಮೆ ನೀಡಿದ್ದಾರೆ.ಮುರುಘಾ ಮಠಕ್ಕೆ ಪ್ರಬುದ್ಧತೆ ಮತ್ತು ಬದ್ದತೆ ಇದೆ. ಮುರುಘಾ ಮಠದ ಪರಂಪರೆಯಲ್ಲಿ ರಕ್ತ ಸಂಬಂಧಗಳನ್ನು ದೂರ ಇಡಲಾಗಿದೆ. ಅವರು ತಪ್ಪು ಮಾಡಿಲ್ಲ ಎಂದು ಜನರು ಎಷ್ಟೆ ಹೇಳಿದರು ಬದಿಗೊತ್ತಾಗಲಿದೆ. ಶರಣರ ಸಹೋದರ ದೊರೆಸ್ವಾಮಿ ವಿರುದ್ಧ ಮಹಿಳೆಯೊರ್ವರು ಅತ್ಯಾಚಾರ ಆರೋಪ ಮಾಡಿದ್ದರು. ಬೆಂಗಳೂರಿನ ಆರ್ ಎಂ ಸಿ ಯಾರ್ಡ್ ನ ಪೋಲಿಸ್ ಠಾಣೆಯಲ್ಲಿ ಮಹಿಳೆ ದೂರು ನೀಡಿದ್ದರು. ಇದಕ್ಕೆ ಸ್ವಾಮೀಜಿ ಸ್ಪಷ್ಟನೆ ನೀಡಿದರು.
ಸಂಯುಕ್ತವಾಣಿ