ದೇಶದ ಉಳಿವಿನ, ಸಂವಿಧಾನದ ಅಳಿವು ಉಳುವಿನ ಚುನಾವಣೆ ಇದಾಗಿದೆ. ನಾವೇನಾದರೂ ತಪ್ಪು ಮಾಡಿದರೆ ನಮ್ಮ ಮುಂದಿನ ಪೀಳಿಗೆಗೆ ವಿಷ ಹಾಕಿದಂತೆ ಎಂದು ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಬಿಎನ್ ಚಂದ್ರಪ್ಪ ಹೇಳಿದರು. ಅವರು ಭರಮಸಾಗರದಲ್ಲಿ ಮುಖಂಡರ, ಕಾರ್ಯಕರ್ತರ ಸಭೆಯಲ್ಲಿ ಮಾತಾಡಿದರು. ಇದು ಕೇವಲ ಚಂದ್ರಪ್ಪನೊಬ್ಬನ ಚುನಾವಣೆಯಲ್ಲ, ಇದು ಪ್ರತಿಯೊಬ್ಬರ ಚುನಾವಣೆ,ದೇಶದ ಭವಿಷ್ಯ ಬರೆಯುವ ಚುನಾವಣೆಯಾಗಿದೆ. ಮೋದಿ ಮೋದಿ ಎಂದು ಹೇಳುತ್ತಾರೆ, ಅದು ಸುಳ್ಳು ಅನಿರೀಕ್ಷಿತ ಫಲಿತಾಂಶ ಬರುತ್ತದೆ. ದೇಶದಲ್ಲಿ ಬಡವರ ಹೊಟ್ಟೆ ಉರಿಯುತ್ತಿದೆ. ದೂರ ದೃಷ್ಟಿಯಿರಬೇಕು. ಚಿತ್ರದುರ್ಗವಷ್ಟೆ ಅಲ್ಲ, ರಾಜ್ಯ, ದೇಶ ಗೆಲ್ಲಬೇಕು. ಸಂವಿಧಾನ ಉಳಿಯಬೇಕು. ಮೋದಿ ಸಾಹೇಬ್ರು ದೊಡ್ಡವರು ಅವರ ಬಗ್ಗೆ ನಾನು ಮಾತಾಡೊಲ್ಲ, ನಾನು ಚಿಕ್ಕವನು,ಮೋದಿ ಅವರಿಂದ 10 ವರ್ಷದಲ್ಲಿ ಏನಾಗಿದೆ ಎಂದು ಹೇಳಲಿ, ಸಿದ್ದರಾಮಯ್ಯ ಅವರಿಂದ ಕಳೆದ ಸರ್ಕಾರದಲ್ಲಿ 158 ಭರವಸೆಗಳು, ಈ ಸರ್ಕಾರದಲ್ಲಿ 5 ಗ್ಯಾರಂಟಿಗಳು,ಮನೆ ಬಾಗಿಲಿಗೆ ಬಂದಿವೆ. ಚಂದ್ರಪ್ಪ ಮನೆ ಮಗ ನಡು ರಾತ್ರಿ ಫೋನ್ ಮಾಡಿದರೆ ಸಿಗ್ತಾನೆ, ಆದರೆ ಮೋದಿ ಸಿಗುತ್ತಾರಾ? ಅವರ ಬಗ್ಗೆ ಟೀಕೆ ಮಾಡುತ್ತಿಲ್ಲ ಎನ್ನತ್ತಲೇ ಅವರು ದೊಡ್ಡವರು ಎಂದು ಲೇವಡಿ ಮಾಡಿದರು. ಸಂಸದ ಎನ್ನುವ ಅಹಂಕಾರ ಬರಲಿಲ್ಲ, ಅದು ಬರುವುದಿಲ್ಲ, ನಾನು ಪೂಜೆ ಮಾಡಿ ದೇವರಲ್ಲಿ ಕೇಳಿಕೊಳ್ಳುವುದು, ಅಹಂಕಾರ ಕೊಡಬೇಡ, ಒಳ್ಳೆ ಬುದ್ದಿ ಕೊಡು ವೈರಿಗಳಿಗೂ ಒಳ್ಳೆದು ಮಾಡು ಎಂದು ಕೇಳಿಕೊಳ್ಳುತ್ತೇನೆ ಎಂದರು.