ಮನೆಯ ಖಾತೆ ಬದಲಾವಣೆಗೆ 40 ಸಾವಿರ ಲಂಚ ಪಡೆಯುತ್ತಿದ್ದಾಗ ಭರಮಸಾಗರ ಗ್ರಾಮ ಪಂಚಾಯಿತಿ ಪಿಡಿಓ ಶಿವಪ್ಪ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ಕುಮಾರಸ್ವಾಮಿ ಎನ್ನುವವರಿಂದ ಖಾತೆ ಬದಲಾವಣೆಗೆ 10 ಸಾವಿರ ಪಡೆದಿದ್ದು, ನಂತರ ಹೊಳಲ್ಕೆರೆಯ ಸ್ಟಾಂಪ್ ವೆಂಡರ್ ಕಲ್ಲೇಶ್ ಅವರ ಕೈಗೆ 40 ಸಾವಿರ ಕೊಡುವಂತೆ ಶಿವಪ್ಪ, ಕುಮಾರಸ್ವಾಮಿಗೆ ಹೇಳಿದ್ದರು. ಕುಮಾರಸ್ವಾಮಿ ಲೋಕಾಯುಕ್ತರಿಗೆ ದೂರು ನೀಡಿದ್ದು, ದೂರಿನಂತೆ ಲೋಕಾಯುಕ್ತ ಪೊಲೀಸ್ ನಿರೀಕ್ಷಕ ವಸಂತ ಕುಮಾರ್ ನೇತೃತ್ವದಲ್ಲಿ ಕುಮಾರಸ್ವಾಮಿ ಶಿವಪ್ಪನಿಗೆ ಲಂಚದ ಹಣ ಕೊಡುವಾಗ ದಾಳಿ ನೆಡೆಸಿ ಶಿವಪ್ಪ ಮತ್ತು ಕಲ್ಲೇಶ್ ರನ್ನು ಬಂಧಿಸಿದ್ದು, ತನಿಖೆ ಮುಂದುವರೆದಿದೆ ಎಂದು ಲೋಕಾಯುಕ್ತ ಎಸ್ಪಿ ವಾಸುದೇವರಾಮ ತಿಳಿಸಿದ್ದಾರೆ.