ಹಾಸನ: ಅನೈತಿಕ ಸಂಬಂಧದ ಹಿನ್ನೆಲೆಯಲ್ಲಿ ಪತ್ನಿಯನ್ನು ಕೊಲೆ ಮಾಡಿ ಕೆರೆಗೆ ಎಸೆದಿದ್ದ ಪತಿ, ಸಹೋದರ ಹಾಗೂ ಪತಿಯ ಗೆಳತಿ ಶೈಲಾ ಇದೀಗ ಕಂಬಿ ಎಣಿಸುತ್ತಿದ್ದಾರೆ. ಇಂತಹ ಘಟನೆಯೊಂದು ಹಾಸನದಲ್ಲಿ ನಡೆದಿದೆ.
ಚಿತ್ರದುರ್ಗ ಜಿಲ್ಲೆ ಹೊಸದುರ್ಗ ತಾಲೂಕಿನ ಬಾಗೂರಿನ ನಾರಾಜ್ ಮತ್ತು ಸುಶ್ಮಿತ ಇಬ್ಬರು ಆರು ವರ್ಷಗಳ ಹಿಂದೆ ಪ್ರೀತಿಸಿ ಮದುವೆಯಾಗಿದ್ದರು. ಆದರೆ ಕಾಲ ಕ್ರಮೇಣ ಪತಿ ನಾಗರಾಜ್ ಶೈಲ ಎಂಬ ಮಹಿಳೆಯೊಂದಿಗೆ ಅಕ್ರಮ ಸಂಬಂಧ ಇಟ್ಟುಕೊಂಡಿದ್ದು ತಿಳಿಯಿತು. ಈ ವಿಚಾರವಾಗಿ ಇಬ್ಬರಲ್ಲೂ ಮನಸ್ಥಾಪವಾಗಿತ್ತು. ಇದರಿಂದ ಪತಿಯಿಂದ ಸುಶ್ಮಿತ ದೂರಾಗಿ ಜೀವನಾಂಶಕ್ಕಾಗಿ ಕೇಸ್ ದಾಖಲಿಸಿದ್ದರು.
ಈ ಬಗ್ಗೆ ಮಾತನಾಡೋಣ ಎಂದು ನಾಗರಾಜ್ ಸಹೋದರ ಹಾಗೂ ಗೆಳತಿಯೊಂದಿಗೆ ಸೇರಿ ಹೊಸದುರ್ಗದ ಬೆಲಗೂರಿಗೆ ಕರೆಸಿಕೊಂಡು ಅಕ್ಟೋಬರ್ ೨೯ ರಂದು ಕೊಲೆ ಮಾಡಿದ್ದರು.
ಕೊಲೆ .ಅಡಿದ ಮೃತ ದೇಹವನ್ನು ಹಾಸನದ ಚೀರನಹಳ್ಳಿ ಕೆರೆಯಲ್ಲಿಎಸೆದು ಬಂದಿದ್ದರು.ಅಂದು ಹೊಸದುರ್ಗದ ಶ್ರೀರಾಂಪುರ ಠಾಣೆಯಲ್ಲಿ ಮಿಸ್ಸಿಂಗ್ ದೂರು ದಾಖಲಾಗಿತ್ತು. ಹಾಸನದ ಪೋಲಿಸರು ಅಪರಿಚಿತ ಮಹಿಳೆಯ ಶವ ಯಾರದ್ದು ಎಂದು ತನಿಖೆ ನಡೆಸಿದಾಗ ಈ ಕೊಲೆ ಪ್ರಕರಣ ಬಯಲಾಗಿದೆ.
ಸಂಯುಕ್ತವಾಣಿ