ಲಂಚದ ಹಣಕ್ಕಾಗಿ ಚೌಕಾಸಿ ಮಾಡಿದ ಗ್ರಾಮಾಂತರ ಠಾಣೆ ಪೊಲೀಸರು

ಕ್ರೈಂ

ಚಿತ್ರದುರ್ಗದ ಗ್ರಾಮಾಂತರ ಠಾಣೆಯಲ್ಲಿ ಜಮೀನು ವಿವಾದ ಬಗೆಹರಿಸುವಂತೆ ಕೇಳಿಕೊಂಡು‌ ಬಂದವರಿಂದ ಹಣ ವಸೂಲಿ ಮಾಡುವ ದೃಶ್ಯ ಸಾಮಾಜಿಕ ಜಾಲ ತಾಣಗಳಲ್ಲಿ ವೈರಲ್ ಆಗಿದೆ. ಎಎಸ್ ಐ ರೇವಣ್ಣ ಲಚದ ಹಣಕ್ಕೆ ಚೌಕಾಸಿ ಮಾಡುತ್ತಿರುವ, ಜೇಬಿಗೆ ಕೈ ಹಾಕಿ ಹಣ ಕಿತ್ತುಕೊಳ್ಳಲು ಯತ್ನಿಸುವ ಹಾಗೂ ಕಡಿಮೆ ಹಣ ಕೊಟ್ಟಿದ್ದಕ್ಕೆ ಎಎಸ್ ಐ ಹಣ ಬಿಸಾಕಿ ನಡೆದ ದೃಶ್ಯ ವೈರಲ್ ಆಗಿದ್ದು, ಮತ್ತೊರ್ವ ಪೊಲೀಸ್ ಸಿಬ್ಬಂದಿ ಹೊಡೆಯಲು ಯತ್ನಿಸುವ ದೃಶ್ಯ ಕಂಡು ಬರುತ್ತಿದ್ದು, ಇದು ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.

 

 

 

Leave a Reply

Your email address will not be published. Required fields are marked *