ತಿಮ್ಮಪ್ಪನ ದರ್ಶಶನ ಪಡೆದು ದೇವರ ಪಾದ ಸೇರಿದರು

ಕ್ರೈಂ

ಕಾರಿಗೆ ನಾಯಿ ಅಡ್ಡ ಬಂದ ಪರಿಣಾಮ ಚಾಲಕನ ನಿಯಂತ್ರಣ ತಪ್ಪಿ ಕಾರು ಡಿವೈಡರ್ ಗೆ ಡಿಕ್ಕಿ‌ ಹೊಡೆದ ಪರಿಣಾಮ ಮಹಿಳೆಯರಿಬ್ಬರು ಸ್ಥಳದಲ್ಲೆ ಸಾವನ್ನಪ್ಪಿರುವ ಘಟನೆ ಚಿತ್ರದುರ್ಗದ ಚಿಕ್ಕ‌ಬೆನ್ನೂರು ಗ್ರಾಮದ ಬಳಿ ನಡೆದಿದೆ.
ಮೃತ ಮಹಿಳೆಯರಿಬ್ಬರನ್ನು ಮಹಾ ರಾಷ್ಟ್ರ ಮೂಲದ ಮಾನ್ಸಿ, ಮತ್ತು ಉಜ್ವಲ್ ಬಾರ್ವಿ ಎಂದು ಗುರುತಿಸಲಾಗಿದೆ. ತಿರುಪತಿಯ ದರ್ಶನ ಮುಗಿಸಿಕೊಂಡು ಮಹಾರಾಷ್ಟ್ರಕ್ಕೆ ವಾಪಾಸ್ಸು ತೆರಳುವಾಗ ಈ ಘಟನೆ ನಡೆದಿದೆ. ಗಾಯಾಳು ಸಚಿನ್ ಬಾರ್ವಿ ಯನ್ನು ಚಿತ್ರದುರ್ಗ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.ಸ್ಥಳಕ್ಕೆ ಭರಮಸಾಗರ ಪೊಲೀಸರು ಭೇಟಿ‌ ನೀಡಿ ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

 

 

 

Leave a Reply

Your email address will not be published. Required fields are marked *