ಚಿತ್ರದುರ್ಗ: ಲಘು ಹೃದಾಘಾತಕ್ಕೊಳಗಾಗಿ ಬಸವೇಶ್ವರ ಆಸ್ಪತ್ರೆ ದಾಖಲಾಗಿರುವ
ಕೋಡಿ ಹಳ್ಳಿ ಆದಿಜಾಂಬವ ಮಠದ ಶ್ರೀ ಮಾರ್ಕಂಡೆಯ ಮುನಿಸ್ವಾಮೀಜಿ ಅವರನ್ನು ಮಾಜಿ ಸಚಿವ ಎಚ್. ಆಂಜನೇಯ ಮಾಡಿದ ಆರೋಗ್ಯ ವಿಚಾರಿಸಿದರು.
ಕಳೆದ ಎರಡು ದಿನಗಳ ಹಿಂದೆ ಚಿತ್ರದುರ್ಗ ಜಿಲ್ಲೆ ಹಿರಿಯೂರು ತಾಲೂಕಿನ ಕೋಡಿಹಳ್ಳಿ ಆದಿಜಾಂಬವ ಮಠದ ಶ್ರೀ ಮಾರ್ಕಂಡೇಯ ಮುನಿ ಸ್ವಾಮೀಜಿ ಲಘು ಹೃದಯಾಘಾತಕ್ಕೆ ಒಳಗಾಗಿದ್ದರು. ಇವರನ್ನು ನಗರದ ಬಸವೇಶ್ವರ ಆಸ್ಪತ್ರೆ ಹಾಗೂ ಸಂಶೋಧನಾ ಕೇಂದ್ರಕ್ಕೆ ದಾಖಲು ಮಾಡಿ ಚಿಕಿತ್ಸೆ ಯನ್ನು ನೀಡಲಾಗುತ್ತಿತ್ತು. ಐಸಿಯೂನಲ್ಲಿದ್ದು ಚಿಕಿತ್ಸೆ ಪಡೆಯುತ್ತಿದ್ದ ಸ್ವಾಮೀಜಿ ಚಿಕಿತ್ಸೆಗೆ ಸ್ಪಂದಿಸಿ ಚೇತರಿಸಿಕೊಂಡಿದ್ದು, ಅವರನ್ನು ಐಸಿಯೂ ನಿಂದ ಸಮಾನ್ಯ ವಾರ್ಡ್ ಗೆ
ರವಾನಿಸಲಾಗಿದೆ. ಇಂದು ಸ್ವಾಮೀಜಿಯವರನ್ನು ಸಮಾಜ ಕಲ್ಯಾಣ ಮಾಜಿ ಸಚಿವ ಎಚ್. ಆಂಜನೇಯ ಹಾಗೂ ಇನ್ನಿತರೇ ಸಮಾಜದ ಮುಖಂಡರು ಭೇಟಿಯಾಗಿ ಆರೋಗ್ಯ ವಿಚಾರಿಸಿದರು.
ಸಂಯುಕ್ತವಾಣಿ