ಚಾಮರಾಜನಗರ: ಯುವರತ್ನ ಚಲನ ಚಿತ್ರದ ಶೂಟಿಂಗ್ ಗೆ ಗಾಜನೂರಿಗೆ ಆಗಮಿಸಿದ ಅಪ್ಪುಗೆ ಸನ್ಮಾನಿಸಲಾಯಿತು.
ಚಾಮರಾಜನಗರ ಜಿಲ್ಲಾಭಿವೃದ್ದಿಗೆ ರಾಯಭಾರಿಯಾಗಿರುವ ಅಪ್ಪು ಪುನೀತ್ ರಾಜ್ ಕುಮಾರ್, ನೂತನ ಚಿತ್ರ ಯುವರತ್ನ ಶೂಟಿಂಗ್ ಗಾಗಿ ಬಂದಿರುವ ಪುನೀತ್ . ಗಾಜನೂರಿಗೆ ಬಂದಿರುವ ಪುನೀತ್ ರ ಯುವರತ್ನ ಚಿತ್ರ ಯಶಸ್ವಿಯಾಗಲಿ ಎಂದು ರಾಮಸಮುದ್ರದ ಹರಳುಕೋಟೆ ಜನಾರ್ಧನ ಸ್ವಾಮೀಗೆ ಅರ್ಚಕ ಅನಂತ್ ಪ್ರಸಾದ್ ಪೂಜೆ ಸಲ್ಲಿಸಿ ಪ್ರಸಾದ ನೀಡಿ ಆಶೀರ್ವಾದಿಸಿದರು.
ಮೊದಲ ಬಾರಿಗೆ ಚಾಮರಾಜನಗರ ಜಿಲ್ಲೆಗೆ ಚಿತ್ರೀಕರಣಕ್ಕಾಗಿ ಬಂದಿರುವ ಪುನೀತ್ ಅವರಿಗೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ವಿನಯ್ ಸನ್ಮಾನಿಸಿ ಗೌರವಿಸಿದರು.
ಸಂಯುಕ್ತವಾಣಿ