ಬಿಜೆಪಿ ಅಭ್ಯರ್ಥಿಯಿಂದ ಮತದಾರರಿಗೊಂದು ಪತ್ರ ಏನಿದೆ ನೋಡಿ ಪತ್ರದಲ್ಲಿ

ರಾಜ್ಯ

 

 

 

 

ಅನಂತ ಅನಂತ ಧನ್ಯವಾದಗಳು

ಮತದಾನದ ದಿನದಂದು ತಮ್ಮ ಪವಿತ್ರವಾದ ಆಶೀರ್ವಾದ ರೂಪದ ಮತವನ್ನು ಕರುಣಿಸಿದ, ಸಮಸ್ತ ಮತದಾರ ಬಂಧುಗಳಿಗೆ ಅನಂತ ಕೋಟಿ ಧನ್ಯವಾದಗಳನ್ನು ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಗೋವಿಂದ ಕಾರಜೋಳ ತಿಳಿಸಿದ್ದಾರೆ.
ಬಿರುಬಿಸಲಿನಲ್ಲಿ, ಉದ್ದದ ಸಾಲಿನಲ್ಲಿ ಗಂಟೆಗಟ್ಟಲೆ ನಿಂತು, ಪ್ರಜಾಪ್ರಭುತ್ವ ಪರ್ವದಲ್ಲಿ ಭಾಗಿಯಾಗಿ ಕರ್ತವ್ಯ ನಿಭಾಯಿಸಿದ ಸಮಸ್ತ ನಾಗರಿಕರಿಗೂ ಧನ್ಯವಾದಗಳನ್ನು ಅರ್ಪಿಸುವೆ. ಜನತೆಯೇ ಜನಾರ್ಧನ ಸ್ವರೂಪಿಗಳು, ಅವರ ಆಶೀರ್ವಾದವೂ ದೈವ ಸ್ವರೂಪವೇ. ಈ ಆಶೀರ್ವಾದ ಕರುಣಿಸಿಸ ಪ್ರತಿಯೊಬ್ಬ ಮತದಾರರಿಗೂ ಇನ್ನೊಮ್ಮೆ ಹೃದಯಪೂರ್ವಕವಾಗಿ ಅಭಿನಂದನೆ, ಧನ್ಯವಾದಗಳನ್ನು ಸಮರ್ಪಿಸುವೆ. ನಿಮ್ಮ ಅಭಿಮಾನ, ಪ್ರೀತಿ, ವಿಶ್ವಾಸ ಹೀಗೆ ಇರಲಿ ಎಂದು ಕೋರುತ್ತಾ ಎಲ್ಲರ ಬದುಕಿನಲ್ಲಿ ಸುಖ, ಶಾಂತಿ, ನೆಮ್ಮದಿ, ಯಶಸ್ಸು ಭಗವಂತ ಕರುಣಿಸಲಿ ಎಂದು ಪ್ರಾರ್ಥಿಸುವೆ ಎಂದಿದ್ದಾರೆ.

Leave a Reply

Your email address will not be published. Required fields are marked *