ಬೆಂಗಳೂರು:ರಾಜಕೀಯ ಕ್ಷೇತ್ರದಲ್ಲಿ ಅಲ್ಲೋಲ ಕಲ್ಲೋಲ ಮಾಡಿದ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣದ ರೂವಾರಿ ಸಿಡಿ ಲೇಡಿ ಇಂದು ಮೆಡಿಕಲ್ ಚಕಪ್ ಗೆ ಒಳಪಡಲಿದ್ದು ಬೌರಿಂಗ್ ಆಸ್ಪತ್ರೆ ಗೆ ಕರೆದು ಕೊಂಡು ಹೋಗಿದ್ದಾರೆ.
ಸಿಡಿಲೇಡಿಯು ಕಳೆದ 28 ದಿನಗಳ ಬಳಿಕ ಮೆಡಿಕಲ್ ಚಕಪ್ ಗೆ ಹೋಗಿದ್ದು ಮೆಡಿಕಲ್ ಚಕಪ್ ನ್ನು ಓರ್ವ ಫಿಜಿಸಿಯನ್, ಸ್ತ್ರೀ ರೋಗ ತಜ್ಞೆ, ಓರ್ವ ಸ್ಟಾಫ್ ಉಳಿದಂತೆ 5 ಜನ ವೈದ್ಯಕೀಯ ತಂಡ ಮಾಡುತ್ತಿದೆ. ನಂತರ ಅಧಿಕಾರಿಗಳು ಸಿಡಿಲೇಡಿಯೂ ರಮೇಶ್ ಜಾರಕಿಹೊಳಿ ಓಡಾಡಿದ ಸ್ಥಳಗಳು ಹಾಗೂ ಮನೆಗೂ ಭೇಟಿ ನೀಡಿ ಮಹಜರ್ ಮಾಡಿ ಮಾಹಿತಿ ಕಲೆ ಹಾಕಲಿದೆ.
ಇತ್ತ ರಮೇಶ್ ಜಾರಕಿಹೊಳಿ ನಿನ್ನೆ ಯೇ ಮುಂಬೈ ಗೆ ತೆರಳಿ ಖಾಸಗಿ ಹೋಟೆಲ್ ಒಂದರಲ್ಲಿ ತಂಗಿದ್ದಾರೆ. ಸಿಡಿಲೇಡಿಯ ಹೇಳಿಕೆಯಿಂದ ತೊಂದರೆಯಾಗಬಹುದು ಎಂದು ಬಂಧನದ ಭೀತಿಯಲ್ಲಿರುವ ರಮೇಶ್ ಜಾರಕಿಹೊಳಿ ಆಂಟಿಸೆಪೆಟರಿ ಬೇಲ್ ತೆಗೆದುಕೊಳ್ಳಲು ಸಿದ್ದತೆ ಮಾಡಿಕೊಳ್ಳುತ್ತಿದ್ದಾರೆ. ಇದರ ಜವಾಬ್ದಾರಿಯನ್ನು ಸಹೋದರ ಬಾಲಚಂದ್ರ ಜಾರಕಿಹೊಳಿಗೆ ಹೊರಿಸಲಾಗಿದೆ ಎಂದು ಹೇಳಲಾಗುತ್ತಿದೆ.
ಸಂಯುಕ್ತವಾಣಿ