ಚಿತ್ರದುರ್ಗ: ಸ್ವಂತ ಬಲದಲ್ಲಿ ನಿಮಗೆ ತಾಕತ್ತಿದ್ದರೆ ಪ್ರಾದೇಶಿಕ ಪಕ್ಷ ಕಟ್ಡಿ ೧೦ ಸ್ಥಾನಗಳನ್ನು ಗೆದ್ದು ತೋರಿಸಿ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಮಾಜಿ ಸಿಎಂ ಸಿದ್ದರಾಮಯ್ಯ ಗೆ ಸವಾಲ್ ಹಾಕಿದ್ದಾರೆ.
ಚಾಮುಂಡೆಶ್ವೇರಿ ಕ್ಷೇತ್ರದಲ್ಲಿ ಕಾರ್ಯಕರ್ತರ ಸಭೆ ನಡೆಸಿ ಅಲ್ಲಿ ನನ್ನ ಸೋಲಿಗೆ ಕಾರಣವೇನು ಎಂದು ಪ್ರಶ್ನಿಸುವ ಮೂಲಕ ಎಚ್ಡಿಕೆ ಹಾಗೂ ಯಡಿಯೂರಪ್ಪ ಮೇಲೂ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದರು.
ಈಗ ಎಚ್ಡಿಕೆ ಟ್ವೀಟರ್ ಮೂಲಕ ಸಿದ್ದರಾಮಯ್ಯ ಗೆ ಟಾಂಗ್ ನೀಡುವ ಮೂಲಕ ಸವಾಲ್ ಹಾಕಿದ್ದಾರೆ. ಸ್ವತಂತ್ರ ಪಕ್ಷ ಕಟ್ಟಲು ತಾಕತ್ ಬೇಕು.
ಒಳ ಒಪ್ಪಂದದ ಜನಕ ನೀವೇ ಅಲ್ವವೇ? ಒಳ ಒಪ್ಪಂದದ ಬಗ್ಗೆ ನೀವು ಮಾತನಾಡಬೇಡಿ. ಪರಮೇಶ್ವರ್ ಅವರನ್ನು ಸೋಲಿಸಿದವರು ಯಾರು? ಕೊರಟಗೆರೆಯಲ್ಲಿ ಯಾರ ಜೊತೆ ಒಪ್ಪಂದ ಮಾಡಿಕೊಂಡಿದ್ದಿರಿ? ನೀವು ನಿಮ್ಮ ಪಕ್ಷಕ್ಜೆ ಮಾಡಿದ ದ್ರೋಹ ಅಲ್ಲವೇ? ಸರಣಿ ಪ್ರಶ್ನೆಗಳ ಮೂಲಕ ಟ್ವೀಟಾಸ್ತ್ರದ ಮೂಲಕ ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ.
ಸಂಯುಕ್ತವಾಣಿ